Saturday, September 17, 2016

THAYIYA MADILU

 ತಾಯಿಯ ಮಡಿಲಲ್ಲಿ
==================
ಶ್ರೀ ಕುಕ್ಕೇ ಸುಬ್ರಮಣ್ಯಸ್ವಾಮಿಯವರ ಅನುಗ್ರಹದಿಂದಲೂ
ಶ್ರೀ ಆವನಿಮಹಾ ಸ್ವಾಮಿಗಳ ಆಶೀರ್ವಾದದಿಂದಲೂ
ಶ್ರೀ ಷಣ್ಮುಖಪ್ರಿಯಾ ಅವರಿಂದ
==============================
ನನ್ನ ನಲ್ಮೆಯ ನಲ್ಲೆ ನಮಗಾಗಿ ನಿರಂತರ
ನಿಸ್ಪ್ರೂಹತೆಯಿಂದ ಶ್ರಮಿಸುತ್ತಿರಲು ಅವರ
ಎಪ್ಪತ್ತನೆಯ ಹರೆಯದ ಸವಿನೆನಪಿಗಾಗಿ ನಲ್ಲ
ನೀಡುವ ನವಕುಸುಮ
============================================
ಅಡಕ
=======
.ಜಗತ್ತಿನ ಸೃಷ್ಟಿ, ಸ್ಥಿತಿ,ಲಯ ಕಾರಣ-ಪಾರ್ವತಿ ಪರಮೇಶ್ವರರು.
.ತ್ರಿಮೂರ್ತಿಗಳು-ಅವರೆಲ್ಲರ ಮೂಲಶಕ್ತಿ-ಜಗನ್ಮಾತೆ.
.ನವರಾತ್ರಿಯಲ್ಲಿ ತ್ರಿಶಕ್ತಿಗಳು.
.ಮಹಾಕಾಳಿ.
.ಮಧುರೆ ಮೀನಕ್ಷಿ.
.ಕಂಚಿ ಕಾಮಾಕ್ಷಿ
.ಕಾಶಿ ವಿಶಾಲಾಕ್ಷಿ.
.ದಾಕ್ಷಾಯಣಿ.
.ಗಿರಿಜಾಕಲ್ಯಾಣ.
.ಕನ್ಯಾ ಕುಮಾರಿ
.ಮೈಸೂರು ಚಾಮುಂಡೇಶ್ವರಿ.
.ವೈಷ್ಣೋದೇವಿ.
.ತಲಕಾಡು ಶ್ರೀ ವೈದ್ಯೇಶ್ವರ-ಮನೋನ್ಮನಿ
೧೦.ಶ್ರೀ ಶೈಲ ಮಲ್ಲಿಕಾರ್ಜುನ-ಭ್ರಮರಾಂಬ.
೧೧.ನಂಜನಗೂಡು ಶ್ರೀಕಂಠೇಶ್ವರ=ಗಿರಿಜಾಂಬಾ
೧೨.ಅರುಣಾಚಲೇಶ್ವರ.ಅಪಿತಕುಚಾಂಬಾ
೧೩.ಶ್ರೀ ಕಾಳಹಸ್ತೇಶ್ವರ.-ಉಮಾದೇವಿ
೧೪.ಶ್ರೀ ಕರುಮಾರಿಯಮ್ಮನ್.
೧೫.ಮಾಂಗಾಡು ಕಾಮಾಕ್ಷಿ.
೧೬.ತಿರುಕ್ಕಡೈಯೂರ್ ಅಭಿರಾಮಿ.
.ಮಹಾಲಕ್ಷ್ಮಿ.
===============
೧೭.ಕೊಲ್ಲೂರು ಮೂಕಾಂಬಿಕ.
೧೮.ಕೊಲ್ಲಾಪುರ ಮಹಾಲಕ್ಷ್ಮಿ.
೧೯.ಅಯೋಧ್ಯಾಪತಿ.ಸೀತಾಪತಿ-ಜಾನಕಿ.
೨೦.ತಿರುಪತಿ ಶ್ರೀ ವೆಂಕಟೇಶ್ವರ-ಪದ್ಮಾವತಿ.
೨೧.ಶ್ರೀ ಕ್ರಿಷ್ಣಾ-ರುಕ್ಮಿಣಿ-ಸತ್ಯಭಾಮ.ಆಂಡಾಳ್.

.ಮಹಾಸರಸ್ವತಿ.
==================
.ಶೃಂಗೇರಿ ಶರದಾಂಬ.
.ಶಿವಗಂಗೆ ಶಾರದಾಂಬ.
ಬೆಂಗಳುರು ಶಾರದಾಂಬ.
.ಕಾಶ್ಮೀರಪುರವಾಸಿನಿ
.ವೈಷ್ಣೋದೇವಿ.
.ಚೋಟಾನಿಕ್ಕರ ಭಗವತಿ.
.ವಿಜಯವಾಡ ದುರ್ಗಾಪರಮೇಶ್ವರಿ.
.ಕಾಳಿದಾಸನಿಗೆ ಒಲಿದ ಮಹಾಕಾಳಿ.
.ಭೂದೇವಿ.ಸಹನೆಯ ಪ್ರತಿರೂಪ
೧೦.ಮುಕ್ತಾಯ.
================

ಅಧ್ಯಾಯ-.
=============
ಸ್ಥಿತಿ, ಲಯ
ಜಗತ್ತಿನ ಸೃಷ್ಟಿ, ಸ್ಥಿತಿ,
 ಲಯಗಳ ಕಾರಣ. ಪಾರ್ವತಿ, ಪರಮೇಶ್ವರರು.
===================================================

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತಹ ಪಿತರೌ ವಂದೇ ಪರ್ವತಿ ಪರಮೇಶ್ವರೌ
================================================
ಇದು ಕವಿರತ್ನ ಕಾಳಿದಾಸನ ಒಂದು ಶ್ಲೋಕ
ಜಗತ್ತು ಎಂಬುದು ತಾನಾಗಿಯೇ ಸೃಷ್ಟಿಯಾಗಿದ್ದಲ್ಲ. ಇದರ ರಹಸ್ಯವನ್ನು ಅರಿಯಲು ಮುನಿಪುಂಗವರು
ಸಹಸ್ರಾರು ವರ್ಷಗಳು ತಪಗೈದು ನಂತರ ಅದರ ಅರಿವನ್ನು ಪಡೆದರು.
ಪ್ರಳಯಕಾಲದಲ್ಲಿ ಪ್ರಪಂಚವೆಲ್ಲವೂ ಲಯವಾಗಿ ಶ್ರಿಹರಿಯ ಗರ್ಭದಲ್ಲಡಗಿರುತ್ತದೆ. ನಂತರ
ಅಲದೆಲೆಯಮೇಲೆ ಮಲಗಿದ್ದ ಪರಮಾತ್ಮ ಸೃಷ್ಟಿ ಮಾಡಲು ಸಂಕಲ್ಪಿಸಿದಾಗ ಕಾರ್ಯವನ್ನು ಬ್ರಹ್ಮನಿಗೆ
ಒಪ್ಪಿಸಿದ. ಆದರೆ ಬ್ರಹ್ಮನು ಅದರ ಬಗ್ಗೆ ಏನನ್ನೂ ತಿಳಿಯದಿದ್ದಾಗ, ತನ್ನ ತಂದೆ ಶ್ರೀಹರಿಯನ್ನು ಪ್ರಾರ್ಥಿಸಲು
 ಶ್ರೀಹರಿಯು ಬ್ರಹ್ಮನಿಗೆ ಸಹಸ್ರವರ್ಷಗಳು ತಪಸ್ಸನ್ನಾಚರಿಸಲು ಆಜ್ಞೆಯಿತ್ತ. ತಪಸ-
ನ್ನಾಚರಿಸಿದ ಬ್ರಹ್ಮನಿಗೆ ವೇದದಲ್ಲಿ ಉಕ್ತವಾಗಿರುವ ನಿಯಮದಂತೆ ಸೃಷ್ಟಿಕಾರ್ಯ ನಡೆಸಲು ಆಜ್ಞಾಪಿಸಿದ.
ಮೊದಲು ಬ್ರಹ್ಮ ಮಾನಸ ಪುತ್ರರು, ನಂತರ, ಮಾನವರು, ಪಶು ಪಕ್ಷಿಗಳು, ವೃಕ್ಷಗಳ ಸೃಷ್ಟಿಯಾಯಿತು.
ಮಾನವನ ಸೃಷ್ಟಿಗೆ ಮಾರ್ಗವೇನು.
ಪುರುಷರ ಜೊತೆಯಲ್ಲಿ ಸ್ತ್ರೀಯರನ್ನೂ ಸೃಷ್ಟಿಸಿ ಧರ್ಮಮಾರ್ಗದ ಹಾದಿಯಿಂದ ವಿವಾಹ ಮಾರ್ಗವನ್ನು ತೋರಿ 
ಅವರ ಸಮ್ಮಿಲನದಿಂದ ಸೃಷ್ಟಿಕಾರ್ಯ ಆರಂಭವಾಯಿತು. ಅಂಡದಲ್ಲಿ ತೋರಿದ ಜೀವಾಣುವು ಮಾಸಗಳು ಕಳೆದಂತೆ
ಅಂಗಗಳು, ಅವಯವಗಳು ವೃದ್ಧಿಯಾಗಿ, ತಾಯಿಯ ಮೂಲಕ ಅನ್ನಾಹರವನ್ನು ಸ್ವೀಕರಿಸಿ, ನವಮಾಸದನಂತರ
ಹೊರಬಂದಿತು. ತನ್ನರಿವೇ ಇಲ್ಲದೆ, ಮೊದಲು ತಾಯಿಯನ್ನು ಗುರುತಿಸಿ, ಆಕೆಯ ಮೂಲಕ ತಂದೆ ಮತ್ತು ಇತರರನ್ನು
ಗುರುತಿಸಿ, ತನ್ನ ಹಸಿವನ್ನು ಶಬ್ದದ ಮೂಲಕ ಪ್ರಕಟಿಸಿ, ಆರು  ತೀಂಗಳ ನಂತರ ಮೆಲ್ಲ ಮೆಲ್ಲ ತೆವಳಿ
ಒಂಬತ್ತು ತಿಂಗಳ ನಂತರ ಎದ್ದು ಬಿದ್ದು ನಡೆಯಲು ಪ್ರಾರಂಭಿಸಿ, ತೊದಲು ನುಡಿಗಳನ್ನಾಡುತ್ತಾ, ಆಹಾರಸೇವನೆಯಲ್ಲಿ
ದ್ರವದೀಂದ ಘನಕ್ಕೆ ತಿರುಗಿ, ಅನ್ನ, ಆಹಾರ ಸೇವಿಸಿ, ಕರೆಯಲು ಒಂದು ಹೆಸರು ಗಳಿಸಿ, ನಂತರ ನೋಟದಿಂದ,
ಕೇಳಿ, ಚಿಕ್ಕ-ಪುಟ್ಟ ಜ್ಞಾನ ಪಡೆದು, ಐದು ವರುಷದಲ್ಲಿ ಗುರುವಿನಿಂದ
ಜ್ಞಾನ ಪಡೆಯಲು ಪ್ರಾರಂಭಿಸಿ, ಒಂದುವರೆ ದಶಕದನಂತರ ಪದವಿ ಗಳಿಸಿ,, ಉದ್ಯೋಗ ಗಳಿಸಿ, ಹೆಂಡತಿಯೆಂಬ
ಸಹಚರಿಣಿಯನ್ನು ಪಡೆದು, ಕುಟುಂಬ ನಿರ್ವಹಣೆ, ಸಮಾಜಕ್ಕೆ ತನ್ನ ಕರ್ತವ್ಯವನ್ನು ಪೂರೈಸುತ್ತ, ಮೂರು ದಶಕ-
ಗಳನಂತರ, ಪರಮ ಪದವಿಯತ್ತ ಅಧ್ಯಾತ್ಮ ಜ್ಞಾನ ಪಡೆಯಲು ಹಂಬಲಿಸಿ, ಬಂಧನದ ಹಂದರದಿಂದ ಹೊರಬಂದು
ಸೃಷ್ಟಿಕರ್ತನ ಸವಿನೆನಪಿನೊಂದಿಗೆ ಸಮೀಪಿಸುತ್ತಾ ನಲಿದು ಅಂತಿಮದಲ್ಲಿ ಅವನೊಡನೆ ಐಕ್ಯವಾಗುವುದೇಜೀವನ ಚೈತ್ರ.’
ಇದು ಸಾಮಾನ್ಯ ಜೀವನದ ನಡಿಗೆಯಾದರೆ, ಪ್ರತಿಯೊಬ್ಬ ವ್ಯಕ್ತಿಯ ಹಿಂದೆ, ಮಾಡಿದ ಕರ್ಮಾನುಸಾರ[ಪ್ರಾರಬ್ಧ], ಇಂದಿನ
ಬಾಳನ್ನು ನಡೆಸಿ[ಸಂಚಿತ], ಈಗ ಸತ್ಕರ್ಮಗಳನ್ನು ಆಚರಿಸಲು, ಭವಿಷ್ಯದ ಜೀವನವು ಸುಖಪ್ರದವಾಗಿರುತ್ತದೆ.
[ಆಗಮ].
ಭಗವಂತ ನಿರ್ಣಯಿಸುವ ಬಾಳಿನಲ್ಲಿ, ಜನ್ಮಸಮಯದಲ್ಲಿ ನವಗ್ರಹಗಳ ಸಂಚಾರ ಅತಿ ಮುಖ್ಯ. ಇದೇಗ್ರಹಚಾರ.’
ಅದೇ ರೀತಿ ;ಕಾಣದ ಕೈಯ್ಯ ಕೈವಾಡವದವೂಇರುವುದು.[ಅದೃಷ್ಟ].ಶರೀರದ ಜೊತೆಗೆ, ಐದು ಜ್ಞಾನೇಂದ್ರಿಯಗಳು, ಐದು
ಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ, ಅಂತಃಕರಣ, ಚಿತ್ತ, ಅಹಂಕಾರ, ಮತ್ತು ಆತ್ಮಗಳ ಸಂಯೋಜನೆಯೂ ಉಂಟು.
ದೇಹೋ ದೇವಲಯ ಪ್ರೋಕ್ತೋ ದೇಹೋ ದೇವ ಸದಾಶಿವಃಎಂದರೆ, ದೇಹೋ- ದೇಹವೇ ದೇವಾಲಯವು.ದೇವನು ದೇವಾಲಯದ ವಾಸಿ.ನಮಗೆ ಮಾತಾಡಲು ಬಾಯಿ, ಅದಕ್ಕೆ ಪ್ರೇರಣೆಬುದ್ಧಿ.’.ರುಜು ಮಾರ್ಗದಲ್ಲಿ ನಡೆದರಿ ಉತ್ತಮ ಮಾತುಗಳ ಆವಿರ್ಭಾವ.
ದುರ್ಮಾರ್ಗಿಗಳಿಗೆ ಮಾತು ಹಾನಿಕರ.

ಮಾತು ಮತ್ತು ಅರ್ತಗಳ ಸಮ್ಮೇಳನವೇಪಾರ್ವತಿ-ಪರಮೇಶ್ವರರು. ಅವರೇ ಜಗತ್ತಿಗೆ ಒಡೆಯರು.ಸದಾ ಕಾಲವೂ ತನ್ನ
ಮಕ್ಕಳ ಹಿತವನ್ನೇ ಚಿಂತಿಸುತ್ತಾ, ಸನ್ಮಾರ್ಗದಲ್ಲಿ ನಡೆಸುತ್ತಾ, ಸನ್ಮಂಗಳವನ್ನು ಕೋರುತ್ತಾ, ಸದಾ ನಮ್ಮೊಡನಿರುವ,
ಸದಾಶಿವ-ಜಗನ್ಮಾತೆಯರಿಗೆ ನಮ್ಮ ಪ್ರಥಮ ನಮನ. ಸೃಷ್ಟಿಗೆ ನಮ್ಮ ತಾಯಿತಂದೆಯರು ಕಾರಣರಾದರೂ, ನಮ್ಮ ಜೀವನಕ್ಕೆ
ಬುನಾದಿ ಹಾಕಿ ನಡೆಸುವವರು ಶಿವ-ಪಾರ್ವತಿಯರು. ಇದೇ ಕಾಳಿದಾಸನ ಶ್ಲೋಕದ ಅರ್ತ.

ಅಧ್ಯಾಯ-.
==========
ತ್ರಿಮೂರ್ತಿಗಳು.
================
ಅವರೆಲ್ಲರ ಶಕ್ತಿ-ಜಗನ್ಮಾತೆ
============================

ಒಂದು ಸಂಸ್ತೆಯಲ್ಲು ಉತ್ಪಾದನೆಗೆ ಒಬ್ಬ ವ್ಯವಸ್ತಾಪಕ, ರಕ್ಷಣೆಗೆ ಒಬ್ಬ, ವಿಲೇವಾರಿಗೆ ಒಬ್ಬ, ಎಂದು ಇರುತ್ತಾರೆ.
ಇವರೆಲ್ಲರಿಗೂ ಮೇಲ್ಪಟ್ಟು ಒಬ್ಬ ನಿರ್ವಹಣಾಧಿಕಾರಿ 
. ಆದರೆ ಇವರೆಲ್ಲರ ಉದ್ದೆಶ ಒಂದೇ. ನಡೆಯುವ ಸಂಸ್ತೆಯ
ಅಭಿವೃದ್ಧಿ. ಜಗತ್ತಿನ ಮಹಾ ಸಂಸ್ತೆಯನ್ನು ನಿರ್ವಹಿಸಲು ಮೂವರು ವ್ಯವಸ್ತಾಪಕರು ಇರುತ್ತಾರೆ.

ಸೃಷ್ಟಿಕರ್ತ;-ಅವನಿಗೆ ಚತುರ್ಮುಖ ಬ್ರಹ್ಮ ಎಂದು ಹೆಸರು. ಶ್ರೀ ವಿಷ್ಣುವಿನ ಪುತ್ರ. ನಾಲ್ಕು ಕಡೆಯೂ
ನಡೆಯುವ ವ್ಯವಹಾರಗಳನ್ನು ಕಂಡು ಅದರಂತೆ ನಡೆಯುವ ವ್ಯಕ್ತಿ.ಅವನ ಕರ್ತವ್ಯವು ಶ್ರೀ ವಿಷ್ಣುವಿನ
ಆಣತಿಯಂತೆ ನಡೆಯುತ್ತದೆ.

ಶ್ರೀ ವಿಷ್ಣು;- ರಕ್ಷಣೆಯ ವಿಭಾಗದ ನಿರ್ವಾಹಕ. ಎಲ್ಲಾ ದೇವರುಗಳಲ್ಲಿಯೂ ಸರ್ವ ಶ್ರೇಷ್ಟನೆಂಬ ಹೆಗ್ಗಳಿಕೆ.
ಜಾಣ್ಮೆ, ಸಹನೆ, ಮನೋ-ನಿಗ್ರಹ, ಮನೋ ಸ್ಥೈರ್ಯ, ಹುಸಿನಗೆ, ಅತಿ ಸೂಕ್ಷ್ಮ ವಿವೇಕ, ಸಮಸ್ಯೆಗಳ ಪರಿಹಾರಕ್ಕೆ
ಸೂಕ್ತ ಮಾರ್ಗ, ಆಳವಾದ ಚಿಂತನೆ, ಭಕ್ತನನ್ನು ರಕ್ಷಿಸಲು ಯಾವ ಕಾಲಕ್ಕೂ ಯಾವ ಮಾರ್ಗಕ್ಕೂ ಸಿದ್ಧ.

ಹತ್ತು ಅವತಾರವೆತ್ತಿದರೂ ಒಂದೊಂದು ಉದ್ದೆಶದಿಂದ ಕಾಣಿಸಿಕೊಂಡು ಮತ್ಸ್ಯಾವತಾರದಿಂದ ವೇದ ರಕ್ಷಣೆ, ಕೂರ್ಮಾವತಾರಿ-
ಯಾಗಿ ಅಮೃತ ಮಥನಕ್ಕೆ ಸಹಾಯ, ವರಾಹನಾಗಿ ಭೂದೇವಿಯ ರಕ್ಷಣೆ,ನರಸಿಂಹನಾಗಿ ಭಕ್ತನ ರಕ್ಷಣೆ, ವಾಮನ-
ನಾಗಿ ಬಲಿ ಗರ್ವಭಂಗ, ತ್ರಿವಿಕ್ರಮನಾಗಿ ಮೂರ್ಲೋಕಗಳ ಅಳೆಯುವಿಕೆ, ಪರಶುರಾಮನಾಗಿ ಕ್ಷತ್ರಿಯರ ದಮನ,ಶ್ರೀ
ರಾಮನಾಗಿ ಧರ್ಮ ರಕ್ಷಣೆ, ಶ್ರೀ ಕ್ರಿಷ್ಣನಾಗಿ ಸಾಧು ರಕ್ಷಣೆ, ದುರ್ಜನರ ನಿಗ್ರಹ. ಬುದ್ಧನಾಗಿ ಶಾಂತಿ ಪ್ರಸಾರ,
ಕಲ್ಕಿಯಾಗಿ ಉದ್ದೇಶ ಪೂರ್ತಿಯನಂತರ, ಸ್ವಕ್ಷೇತ್ರ ಪಯಾಣ.

ಪರಮೇಶ್ವರ;ಹಿಮಗಿರಿಯಲ್ಲಿದ್ದು, ಹಿಮವಂತನ ಮಗಳನ್ನು ವರಿಸಿ, ಗಣಪ, ಸ್ಕಂದರಿಗೆ ಜನ್ಮವಿತ್ತು, ಶಿರದಲ್ಲಿ
ಗಂಗೆಯನ್ನು ಧರಿಸಿ, ಗಂಗಾಧರನಾಗಿ ಶಶಿಯನ್ನು ಧರಿಸಿ, ಚಂದ್ರಮೌಳಿಯಾಗಿ,
ತ್ರಿಶೂಲದಾರಿಯಾಗಿ, ಹಣೆಗಣ್ಣಿನೊಡನೆ ಮುಕ್ಕಣ್ಣನಾಗಿ, ನಂದಿವಾಹನಾಗಿ, ನಾಗಭೂಷಣನಾಗಿ, ವೃಷಭವಾಹನನಾಗಿ,
ಜಗದ ನಲ್ಮೆಗಾಗಿ ಕಾಲಕೂಟವನ್ನು ಕುಡಿದು, ಗಂಗೆಯನು ಧರೆಗೆ ಇತ್ತು, ದೂರ್ವಾಸರ ಶಾಪದಂತೆ ಲಿಂಗರೂಪಿಯಾಗಿ,
ಮಾರ್ಕಂಡೇಯನನ್ನು ರಕ್ಷಿಸಲು ಯಮನನ್ನೇ ದಂಡಿಸಿ, ತ್ರಿಪುರಾಂತಕನಾಗಿ, ಯೋಗೀಶ್ವರನಾಗಿ, ಸಿಡಿದೆದ್ದಾಗ ರುದ್ರತಾಂಡವ
ಮೂರ್ತಿಯಾಗಿ, ಪಾರ್ಥನಿಗೆ ಪಾಶುಪತಸ್ತ್ರವನ್ನಿತ್ತು, ಮಾವಿನ ಹಣ್ಣಿನ ಘಟನೆಯ ಮೂಲಕ ಮಾತಾಪಿತರ ಹಿರಿಮೆಯನ್ನು ಸಾರಿ
ಮಗನಿಂದ ಪ್ರಣವಾರ್ಥವನ್ನು ಪಡೆದು, ಗಿರಿಜೆಯ ಶರೀರದೊಂದಿಗೆ ಅರ್ಧನಾರೀಶ್ವರನಾಗಿ, ಜಗತ್ತಿನಲ್ಲಿ ಯಾರು ಹಿರಿಯ-
ರೆಂದು ಬ್ರಹ್ಮ, ವಿಷ್ಣು ದ್ವಯರು ಪ್ರಯತ್ನಿಸಲು, ವರಾಹರೂಪದಲ್ಲಿ ಶ್ರೀ ವಿಷ್ಣುವು ಭೂಮಿಯ ತಳವನ್ನು ಸೇರಿ ನಿರಾಶ-
ನಾಗಿ ಹಿಂದಿರುಗಲು, ಬ್ರಹ್ಮನು ಹಂಸರೂಪದಲ್ಲಿ ಗಗನವನ್ನರಸಿ ತೆರಳಿ, ನಿರಾಶನಾಗಿ ಹಿಂದಿರುಗಲು, ಕೇದಿಗೆಯನ್ನು
ಕೇಳಿ ಸುಳ್ಳಾಡಿ, ಮೂರ್ತಿಪೂಜೆಯಿಂದ ವಂಚಿಸಲ್ಪಟ್ಟದ್ದು ಸರ್ವ ವಿದಿತ.

ಜಗತ್ತಿನಲ್ಲಿ ಯಾರು ಹುಟ್ಟಿದರೂ, ’ಯಾತಕ್ಕೆ ಹುಟ್ಟಿದೆಎಂದು ಕೇಳುವುದಿಲ್ಲ’.’ಎಂದು ಸಾಯುವೆಎಂದು ಕೇಳುವುದಿಲ್ಲ.ಆದರೆ,
ಹೇಗಿರುವಿರಿಎಂದು ಕೇಳುತ್ತಾರೆ. ಇದರಿಂದ ಶ್ರೀ ವಿಷ್ಣುವಿನ ಮಹಿಮೆಯನ್ನು ಅರಿಯಬಹುದು.
ಉಪನಿಷತ್ತಿನಲ್ಲಿ ಒಂದು ಸ್ವಾರಸ್ಯವಾದ ಕಥೆಯಿದೆ. ’ದೇವತೆಗಳು ತಾವೇ ಬಲಶಾಲಿಗಲೆಂದು ಭಾವಿಸಿದ್ದರು. ಆಗ ಜಗನ್ಮಾತೆ
ಅಶರೀರವಾಣಿಯಿಂದ, ಅವರನ್ನು ಕರೆದು ಬಲಪರೀಕ್ಷೆಯನ್ನು ಮಾಡಲು, ಒಂದು ಹುಲ್ಲುಕಡ್ಡಿಯನ್ನು ಕದಲಿಸಲು ಆಘಾಪಿಸಿದಳು.
ದೇವೇಂದ್ರ, ಅಗ್ನಿ, ವಾಯು, ಯಾರು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.ಅರಿವು ಪಡೆದ ದೇವತೆಗಳು ದೇವಿಗೆ ಶರಣಾಗಲು,
ತಾಯಿಯ ಹಿರಿಮೆಯನ್ನರಿತರು.

ತ್ರಿಮೂರ್ತಿಗಳ ಪತ್ನಿಯರು ಮೇಲ್ನೋಟಕ್ಕೆ, ಅವರ ಅರ್ಧಾಂಗಿಯಾದರೂ, ಶಕ್ತಿಯ ಪ್ರತಿರೂಪ. ’ಪುರುಶನು ಪರಮಾತ್ಮನಾದರೆ
ಪ್ರಕ್ರುತಿಯು ಶಕ್ತಿ ಸ್ವರೂಪಿಣಿ.ಸ್ವಾಮಿಯಸಂಕಲ್ಪಕ್ಕೆ ರೂಪು ನೀಡಲು ಪ್ರಕೃತಿ ನೆರವು ನೀಡುತ್ತಾಳೆ. ಎಂತಲೇ, ನವರಾತ್ರಿಯಲ್ಲಿ
ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಎಂದು ಅರಾಧಿಸುತ್ತಾರೆ. ಜಗನ್ಮಾತೆಯ ಪರೀಕ್ಷೆಯಿಂದ ಪರಿವರ್ತನಾದ ದೇವೇಂದ್ರನಿಗೆ
ಶ್ರೀ ಮಹಾಲಕ್ಷ್ಮಿ ಸ್ತೊತ್ರದ ಉಪದೇಶವಾಯಿತು.

ಪ್ರತಿ ವ್ಯಕ್ತಿಗೂ ಸಂಪತ್ತು ಅವಶ್ಯ. ಅದು ದ್ರವ್ಯ, ಜ್ಞಾನ, ಪಶು, ಗೃಹ, ಎನಾದರೂ ಅಗಬಹುದು. ಅದರಂತೆ ಜ್ಞಾನವು ಒಂದು ಆಸ್ತಿ.
ವಿದ್ಯಾ ವಿಹೀನ ಪಶುಃ  ಎಂಬುದು ನಾಣ್ಣುಡಿ. ಕಲ್ಲಾದರೂ ಶಿಲ್ಪಿಯ ಉಳಿಯ ಹೊಡೆತದಿಂದ ಶಿಲೆಯಾಗುವಂತೆ, ಚಿನ್ನವು ಅಕ್ಕಸಾಲಿಯಿಂದ ಬೆಂಕಿಯಲ್ಲಿ ಪಕ್ವಗೊಂಡು ಹೊಳೆಯುವಂತೆ, ಆಭರಣವಾಗುವಂತೆ, ಮಾನವ ದೇವಿಯ ಅನುಗ್ರಹದಿಂದ ದೇವನಾಗುವಂತೆ, ಸಮಸ್ತ ಕಾರ್ಯಗಳ ಅನುಷ್ಟಾನಕ್ಕೆ
ಸಾಮರ್ಥ್ಯ ನೀಡುವುದು ಜಗದಂಬೆಯೇ.

ಎಂತಲೇ ಮನುಷ್ಯನಿಗೆ ಪ್ರಾಣವಿದ್ದಂತೆ,’ ತ್ರಿಮೂರ್ತಿಗಳ ಕಾರ್ಯಕ್ಕೆ ಪ್ರೇರಣೆಯಾಗಿ, ಮಾರ್ಗದರ್ಶಿಯಾಗಿ, ದಾರಿ ದೀವಿಗೆಯಾಗಿ, ಉತ್ತೇಜಿಸುವ
ಸ್ಪೂರ್ತಿಯಾಗಿ, ನಡೆಸುವ ಶಕ್ತಿಯೇ ಜಗನ್ಮಾತೆ. ನವರಾತ್ರಿಯಲ್ಲಿ ನವವಿಧಾನಗಳಿಂದ ವಿಜ್ರಂಭಿಸುವ ನವಶಕ್ತಿಗೆ ನಮ್ರತೆಯಿಂದ
ನಮಿಸೋಣ.

ಅಧ್ಯಾಯ-.
============



ಶಕ್ತಿಗಳಲ್ಲಿ ಮೂರು ವಿಧ. ಅವುಇಚ್ಚಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ.ನಾವು ಮನಸಿನಲ್ಲಿ ಬೆಳೆಸಿಕೊಂಡ ಶಕ್ತಿಗಳೇ ಇಚ್ಚಾ ಶಕ್ತಿ.
ಅದನ್ನು ಹೇಗೆ ನಡೆಸಬೇಕೆಂಬುದೇ ಜ್ಞಾನ ಶಕ್ತಿ. ಅದರ ಅನುಷ್ಟಾನವೇ ಕ್ರಿಯಾ ಶಕ್ತಿ. ಭರುವ ಅಡೆತಡೆಗಳಣ್ಣು ನೀಗಿಸಿ, ಕಾರ್ಯವನ್ನು
ಯಶಸ್ವಿಯಾಗಲು ನೆರವು ನೀಡುವವಳೇ ಮಹಾಕಾಳಿ.ದುಷ್ಟರಿಗೆ ಆಕೆ ರುದ್ರಸ್ವರೂಪಿಣಿ. ಭಕ್ತರಿಗೆ ಮಾತೃ ಸ್ವರೂಪಿಣಿ.

ಒಳ್ಳೆಯದು- ಕೆಟ್ಟದ್ದು ಎಂಬ ದ್ವಂದ್ವ ಮೊದಲಿಲಿಂದಲೂ ಪ್ರಪಂಚದಲ್ಲಿ ಇದ್ದದ್ದೇ. ಆದರೆ, ಒಳಿತಿಗೆ ಗೆಲುವಾಗಲು ಕೆಡುಕಿಗೆ ಸೋಲಾಗಲೇಬೇಕು.
ಇದು ಮಹಾಕಾಳಿಯ ಕರ್ತವ್ಯ.

ನಮ್ಮ ಕಾರ್ಯಗಳಿಂದ ಆಗುವ ಪರಿಣಾಮದ ಚಿಂತೆ ಅಗತ್ಯ. ಅದರಿಂದ ಲೋಕೋಪಕಾರವಾಗುವುದೇ -ಲೋಕಕಂಟಕ ಆಗುವುದೇ ಎಂಬ ವಿಮರ್ಶೆ ಅಗತ್ಯ.

ಉದಾ; ಭಸ್ಮಾಸುರನು ಶಿವನಿಂದ ತಾನು ಯಾರ ಶಿರದ ಮೇಲೆ ಕೈ ಇಟ್ಟರೂ ಅವರು ಭಸ್ಮವಾಗಬೇಕೆಂದು ವರ ಪಡೆದ. ಶಿವನನ್ನೇ ಪರೀಕ್ಷಿಸಲು
 ಹೋದಾಗ ವಿಷ್ಣುವು ಉಪಾಯದಿಂದ ವರವನ್ನು ಊರ್ಜಿತಗೊಳಿಸಲು ತನ್ನ ತಲೆಯ ಮೇಲೆಯೇ ಕೈ ಇಟ್ಟುಕ್ಕೊಳ್ಳಲು ಹೇಳಿದ. ಇದರಿಂದ 
ಅಸುರನೇ ಅಸು ನೀಗಿದ.

ಅಂತೆಯೇ ಮಧು-ಕೈಟಭರು ಸಾವಿರ ವರ್ಷ ತಪಸ್ಸು ಮಾಡಿ ವಿಷ್ಣುವನ್ನೆ ವರ ಕೇಳೆಂದು ಹೇಳಿ ಅವರನ್ನು ತೊಡೆಯ ಮೇಲಿಟ್ಟುಕೊಂಡು ಸಮಸ್ಯೆ
ಪರಿಹರಿಸಿದ. ಇದು ಜ್ಞಾನಶಕ್ತಿಯ ಕೆಲಸ.

ನಾವು ಅಂದುಕ್ಕೊಂಡದ್ದೆಲ್ಲಾ ಆಗುವದಿಲ್ಲ. ದೇವರಿಗೆ ನಮಗೆ ಯಾವುದು ಸರಿಯೆಂದು ಕೊಡುವುದು ಗೊತ್ತು.

ಉದಾ;ಒಬ್ಬ ವ್ಯಕ್ತಿ ಚೆನ್ನೈಗೆ ರಾತ್ರಿ ರೈಲು ಸ್ಥಳ ಕಾದಿರುಸುತ್ತಾನೆ. ದಿನ ಅವನ ಮಗನ ಎಂಟ್ರೆನ್ಸೆ ಪರೀಕ್ಷೆಯಿರುವುದರಿಂದ ಅವನೂ
ಹೋಗಬೇಕಾಗಿದೆ. ಅಂದು ರೈಲು ಚಂಗಲ್ಪೆಟ್ ಬಳಿ ಹಳಿ ತಪ್ಪಿದ್ದರಿಂದ ಅಪಘಾತಕ್ಕೀಡಾಯಿತು. ಇದು ಅವನ ಅದೃಷ್ಟ. ’ಬೆಟ್ಟದ  ರೂಪದಲ್ಲಿ
ಬಂದ ಆಪತ್ತು ಹುಲ್ಲಿನ ರೂಪದಲ್ಲಿ ತಪ್ಪಿತು. ಇದು ದೈವಾನುಗ್ರಹವಲ್ಲವೇ.

ಪರಾಶಕ್ತಿಯಲ್ಲಿ ಭಕ್ತಿಯಿಟ್ಟು ಆರಾದಿಸಿದರೆ ಮೂರು ಶಕ್ತಿಗಳಿಂದ ಗೆಲುವು ಶತಸಿದ್ಧವಲ್ಲವೇ.

ನವರಾತ್ರಿ ಎಂದು ಕರೆದು ಹತ್ತು ದಿನ ಆಚರಿಸುತ್ತಾರಲ್ಲಾಎಂಬ ಸಂದೇಹ ಬರಬಹುದು. ಆದರೆ, ಒಂದು ಕಾರ್ಯ ಯಶಸ್ವಿಯಾದರೆ ಅದನ್ನು
ವಿಜಯೋತ್ಸವವಾಗಿ ಆಚರಿಸುವುದು ಕ್ರಮವಲ್ಲವೇ.

ರಾಮಾಯಣದಲ್ಲೂ ಸಹ ಸೀತಾದೇವಿಯನ್ನು ವಾನರರು ಕಂಡು ಬರುವಾಗ ಸುಗ್ರೀವನ ಮಧುವನದಲ್ಲಿ ಕುಣಿದು, ಕುಣಿದು, ಕುಪ್ಪಳಿಸಿ ವಿಜಯದ
ಸಂದೇಶವಿತ್ತ ಉಲ್ಲೇಖವಿದೆ. ಅದುದಸಕಂಠನ ಮೇಲೆ  ವಿಜಯದ ದಿನವೂ ಎನ್ನುತ್ತಾರೆ.

ಆದ್ದರಿಂದ ನವ ವಿಧ ಶಕ್ತಿಯ ಬಹುಮಾನವೂ ಮೋಕ್ಷವೇ. ಆಸೆ, ಅರಿವು, ಅನುಷ್ಟಾನ, ಇವುಗಳ ಸಮ್ಮಿಲನವೇ ವಿಜಯವಾದರೆ ಅದನ್ನು
ಸೇವಿಸಿ ವಿಜಯಲಕ್ಷ್ಮಿಯನ್ನು ಆದರಿಸುವದರಲ್ಲಿ ತಪ್ಪೇನಿದೆ.

ಅಧ್ಯಾಯ-.
-----------

ಮಹಾಕಾಳಿ
=========

ಸರ್ವ ಮಂಗಳ  ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೇ ತ್ರಂಬಿಕೇ ದೇವಿ ನಾರಾಯಣಿ ನಮೋಸ್ತುತೇ

ಮಹಾಮಾತೆಯ ಮೊದಲ ಅವತಾರವೇ ಮಹಾಕಾಳಿ.ಅಂದ್ರೆ ಶಕ್ತಿಯ ಸ್ವರೂಪ. ನಮ್ಮಲ್ಲಿ ಶರೀರ ಇದೆ. ಅದಕ್ಕೆ ಶಕ್ತಿ ತುಂಬುವುದು ತಾಯಿ
.ಕಣ್ಣು ನೋಡುತ್ತದೆ. ಆದರೆ ನೋಟಕ್ಕೆ ಶಕ್ತಿ ಕೊಡುವುದು ತಾಯಿ. ಕಿವಿ ಕೇಳುತ್ತದೆ. ಕೇಳುವ ಶಕ್ತಿ ಕೊಡುವುದು ತಾಯಿ. ಬಾಯಿ  ಮಾತಾಡುವುದು.
ನಾಲಿಗೆ ರುಚಿ ನೋಡುವುದು. ಬುದ್ಧಿ ಯೋಚಿಸುವುದು. ನಾಸಿಕದ ಮೂಲಕ ಉಸಿರಾಟ, ಕೈಗಳ ಚಲನೆ, ಕಾಲ್ಗಳು ನಡೆಯುವುದು, ಜಠರದ
ಹಸಿವು, ಆಹಾರ ಸೇವನೆ, ಜೀರ್ಣ,  ನಂತರ ಹೊರತೆರುವುದು, ನಮ್ಮ ಶರೀರವನ್ನು, ಅವಯವಗಳನ್ನೂ ಇಟ್ಟು, ಯಂತ್ರ 
ನಿರ್ಮಿಸಿ ಅದರಲ್ಲಿ ಪ್ರಾಣವನ್ನಿಟ್ಟು, ಚಲನೆ ಮಾಡುವವನು ಪರಮಾತ್ಮ.

ಅಂತೆಯೇ ಪಂಚಭೂತಗಳ ನಿರ್ಮಾಣ, ವಾಯು, ಜಲ, ಅಗ್ನಿ, ಪ್ರುಥ್ವಿ, ಆಕಾಶ ಇವುಗಳನ್ನು ನಮಗಾಗಿ ನಿರ್ಮಿಸಿ,  ನಿಯಂತ್ರಿಸುವವನು ಪರಮಾತ್ಮ. ಐದು ಕಾರ್ಯಾಂಗಗಳ ನಿರ್ವಹಣೆಯೂ ಹೀಗೆಯೇ.
ಯೋಚನೇ ಹೇಗಾದರೂ ಇರಬಹುದು. ವಿವೇಚನೆ ಇದ್ದರೆ ಪರಿಣಾಮ ಒಳ್ಳೆಯದು. ದುಷ್ಪ್ರಯೋಗವಾದರೆ ಪರಿಣಾಮ
ಅಹಿತಕರ. ಅದನ್ನು ನಡೆಸುವವನು ಆತನೆ. ಜ್ಞಾನ ಸಂಪತ್ತು, ಶಕ್ತಿಗಳ ಸಮ್ಮಿಳನವೇ ಆದಿಶಕ್ತಿ.
ರುಜು ಮಾರ್ಗದಲ್ಲಿ ನಡೆದು ಭಕ್ತಿಯಿಂದ ಸಾಧನೆ ಮಾಡಿ, ಆಕೆಯನ್ನು ಆರಾಧಿಸುವವರಿಗೆ ಆಕೆಯ ಅನುಗ್ರಹ ಅವಿ-
ಸ್ಮರಣೀಯ. ಆದರೆ, ಲೋಕ ನಿಯಮಕ್ಕೆ ಎದುರಾಗಿ ನಡೆದರೆ ಹಿಂಸೆಯನ್ನೇ, ಮೂಲಧನವಾಗಿಸಿಕೊಂಡು, ಅಹಂಕಾರ-
ದಿಂದ ಮೆರೆದು, ಲೋಕನಿಯಮಕ್ಕೆ ಎದುರಾಗಿ ನಡೆದು, ನಿಯಮಗಳನ್ನು ಉಲ್ಲಂಘಿಸಿ, ಋಷಿ ಮುನಿಗಳ ಯಜ್ಞ
ಯಾಗಾದಿಗಳನ್ನು ಕೆಡಿಸಿ, ಅವರನ್ನು ಹಿಂಸಿಸುವವರ ಪಾಲಿಗೆ ಅವಳು ಕಾಳಿ ಯಾಗುತ್ತಾಳೆ.ಆದರೆ ಅಳಿಸುವುದಲ್ಲ
ಅವಳ ಉದ್ದೇಶ.
ಸಾಕಷ್ಟು ಅವಕಾಶ ನೀಡಿ ನಂತರ, ಕ್ರೌರ್ಯದಿಂದಲೂ, ರೌದ್ರದಿಂದಲೂ, ಮೈದೋರಿ, ಅವರೊಡನೆ ಯುದ್ಧ ಗೈದು,
ಕೊಂದು, ಅವರನ್ನು ತನ್ನ ಬಳಿ ಸೆಳೆದು ಮುಕ್ತಿಯನ್ನು ಕೊಡುತ್ತಾಳೆ.
ಮಾತೆಯದು ಮೃದು ಹೃದಯವಲ್ಲವೇ. ಮಗುವನ್ನು ಮುದ್ದು ಮಾಡುವುದರ ಜೊತೆಗೆ, ತಂಟೆ ಮಾಡಿದರೆ ಗದರಿಸುವುದೂ
ಉಂಟು. ಎರಡು ಏಟು ಕೊಡುವುದೂ ಉಂಟು. ಆದರೆ ಉದ್ದೇಶ  ಶಿಕ್ಷೆಯಲ್ಲ. ಸಮಾಧಾನಗೊಳಿಸುವುದು. ಎಂತಲೇ, ’ಕುಪುತ್ರೋ ಜಾಯತೆ
ಕುಮಾತಾ ಭವತಿಎಂಬುದು ಉಕ್ತಿ. ’ಕೆಟ್ಟ ಮಗನು ಇರಬಹುದು, ಕೆಟ್ಟ ತಾಯಿ ಇರುವುದಿಲ್ಲ ಎಂದರ್ಥ.
ಒಬ್ಬ ವ್ಯಕ್ತಿ ತನ್ನ ತಾಯನ್ನು ಕೊಂದು ಹೋಗುತ್ತಿದ್ದಾಗ, ಕರುಳು,’ನಿಧಾನವಾಗಿನಡೆಯಪ್ಪಾ,  ನಿನಗೆ ನೋವಾಗುತ್ತದೆ
ಎಂದಿತಂತೆ.
ಅದಕ್ಕೇ, ಭೂಮಿಯನ್ನು ತಾಯಿಯ ಸಹನೆಯ ಪ್ರತಿರೂಪ ಎನ್ನುವುದು. ’ ತುಳಿಯಿರಿ, ಎಗರಿರಿ, ನಡೆಯಿರಿ, ಭೂದೇವಿ
ಕೋಪಿಸುವುದಿಲ್ಲ. ಆದರೆ ಕೋಪಗೊಂಡಾಗ ಇದ್ದೇ ಇದೆ ಭೂಕಂಪ.ಪ್ರವಾಹ, ಪ್ರಳಯ. ಎಂತಲೇ, ನಡವಳಿಕೆಯಲ್ಲಿ
ಎಚ್ಚರ ಅಗತ್ಯ.

೪ಆ.ಮದುರೆ ಮೀನಾಕ್ಷಿ.
===================

ಚತುರ್ಮುಖ ಬ್ರಹ್ಮ ಮುಖಗಳು ನಾಲ್ಕು.ವೇದಗಳು ನಾಲ್ಕು,ದಿಕ್ಕುಗಳು ನಾಲ್ಕು. ಉಪಾಯಗಳು ನಾಲ್ಕು. ಜೀವನದ ಉದ್ದೇಶಗಳು ನಾಲ್ಕು.
ನಾಣ್ಣುಡಿ.’ ನಾಲ್ಕು ಜನರು ಮೆಚ್ಚುವಂತೆ ಬಾಳಬೇಕೆಂದು.

ಏನು ನಾಲ್ಕರ ಮಹತ್ವ. ಮದುರೆಯಲ್ಲಿ ಪಾಂಡ್ಯ ರಾಜನ ಮಗಳಾಗಿ ಜನಿಸಿ, ಸೌಂದರ್ಯದ ಖನಿ ಎಂದೆನಿಸಿ, ಶಿವನನ್ನೇ ವರಿಸಬೇಕೆಂದು ನಿರ್ಧ
ರಿಸಿ, ಅಖಂದ ತಪಗೈದು ಶಿವನನ್ನು ವರಿಸಿದ ಮಾತೆ ಮೀನಾಕ್ಷಿ.

ನಾಲ್ಕು ಕಡೆಗಳಲ್ಲೂ ಗೋಪುರಗಳು ಮುಗಿಲೆತ್ತರಕ್ಕೆ ನಿಂತಿರಲು, ಫಲ-ಪುಷ್ಪ ಅಂಗಡಿಗಳು ಬೀದಿಯನ್ನು ತುಂಬಿರಲು, ದೇವಾಲಯವನ್ನು ಪ್ರವೇಶಿ-
ಸಿದಾಗ, ಆಗುವ ಆನಂದ ಅದ್ಭುತ.

ಮೊದಲು ಭವ್ಯ ಕರ್ಪಗ ವಿನಾಯಕನ ದರ್ಶನ. ವಿಘ್ನಗಳೆನ್ನು ಹರಿಸಿ ಬೇದಿ ಸಾಗಿರಲು, ಭವ್ಯ ಶ್ರೀ ಸುಂದರೇಶ್ವರನ ಸಂದರ್ಶನ.
ಏನು ತೇಜಸ್ಸು. ಭವ್ಯ ಆಕ್ರುತಿ. ’ಭಕ್ತಿಯನ್ನು ಭಕ್ತನ ಮನಸ್ಸಿನಲ್ಲಿ ಪುಟಿದೆದ್ದು ನಿಲ್ಲುವಂತೆ ಮಾಡುವ ಭವ್ಯ ಆಕೃತಿ. ’ಬಾ, ಎಂದು
ಕರೆಸಿ ಬಳಿಯಲ್ಲಿ ನಿಲ್ಲಿಸಿ, ಭಾವುಕತೆಯಿಂದ ಕಣ್ಣೀರು ಹರಿದಿರಲು, ’ಭಕ್ತ, ಭಯವೇಕೆ, ಭವಹರ ನಾನಿಲ್ಲವೇ’, ಎಂದು ಅಭಯ ನೀಡುವ ಮೌನ ಉತ್ತರ. ಹಿಂದಿರುಗಿ ಬರಲು ಹೆಜ್ಜೆಯ ಹಿಂದೇಟು ಹಾಕಿದರೂ, ಹೋಗಲೇ ಬೇಕು.
 ಅದೇನು ಕಾರುಣ್ಯದ ಮನದ ಸೆಳತ.
ತಾಯಿ ಕರೆಯುತ್ತಿರುವಳಲ್ಲಾ. ಅದೇನು ಭವ್ಯ ತೇಜಸ್ಸು. ಅದೇನು ಮನ ಸೆಳೆವ ವ್ಯಕ್ತಿತ್ವ. ಅದೇನು ಕಾರುಣ್ಯದ ಮನದ ಸೆಳೆತ.

ಜಲದಲ್ಲಿ ಮೀನು ಸಂಚರಿಸುತ್ತಿರುವಾಗ ಕಾಲಿತ್ತರೆ ಮುಲುಗುಟ್ಟುವ ಅನುಭವ. ಒಂದು ಹಿಡಿ ಪುರಿಯನ್ನು ಹಕಿದರೆ, ಅದೆಷ್ಟು ಮೀನುಗಳು ಬಂದು 
ತಿನ್ನುವವು. ಅದೇನು ಆಸ್ವಾದನೆ. ಮಾನವರು ಮನೆಯಲ್ಲಿ ಹಿಡಿದು ಸಂಗ್ರಹಿಸಿದರೆ, ಅದರ ಆನಂದ ಅದೃಶ್ಯ. ಆಹಾರವಾಗಿ ತಿಂದರೆ ಹರ್ಷದ
ನಾಶ.

ಸ್ವಾತಂತ್ರವನ್ನು ಎಲ್ಲಾ ಜೀವಿಗಳೂ ಬಯಸುತ್ತವೆ. ನಮ್ಮ ಅವಯವಗಳಲ್ಲಿ, ಕಣ್ಣನ್ನು ಮೀನಿಗೆ ಹೋಲಿಸುತ್ತಾರೆ. ಮೀನಿನ ಹೋಲಿಕೆಯ ಕಂಗಳನ್ನು
ಹೊಂದಿರುವವಳು ತಾಯಿ ಮೀನಾಕ್ಷಿ. ’ಕಾರುಣ್ಯದ ಬಾಣ ಕಣ್ಣಿನಿಂದ ಹೊರಟು ನೇರವಾಗಿ ಭಕ್ತನ ಹೃದಯದಲ್ಲಿ ನಾಟಿ, ವಿದ್ಯುತ್ಸಂಚಾರ-
ವಾಗುತ್ತದೆ.  ’ತಾಯಿಯ ಅನುಗ್ರಹ ನಿಶ್ಚಿತ.’ ಭುಜದ ಮೇಲಿನ ಗಿಳಿ ಮತ್ತೊಂದು ಮೆರುಗು. ಪ್ರಕೃತಿ
ದೇವತೆ ಹಸಿರು ದುಕೂಲವುಟ್ಟು ಕಂಗೊಳಿಸಿದರೆ, ಹಸಿರು ಸಮೃದ್ಧಿಯ ಸಂಕೇತ. ’ಯಾವ ಕೆಲಸದ ಪ್ರಾರಂಭಕ್ಕೂ, ’ಹಸಿರು ಬಾವುಟ
ಎನ್ನುತ್ತಾರೆ. ಅಂತಲೇ ಗಿಳಿಯ ಬಣ್ಣ ಹಸಿರು. ಆದರೆ ಮಾತು ಮಧುರ. ’ಮಾತೆಯ ಮಾತೂ, ಮೃದುನಗೆಯು, ಮೋಹಕ.’

ಅಣ್ಣನಾದ ಶ್ರೀ ನಾರಾಯಣನುಅಳಗರ್ಎಂಬ ಹೆಸರಿನಲ್ಲಿ ಬಳಿಯಲ್ಲಿಯೇ ಇದ್ದಾನೆ. ತಂಗಿಯ ಮದುವೆಗೆ ಹೊತ್ತಾಗಿ ಬಂದನೆಂದು ಪ್ರತೀತಿ.
ಮಧುರೆಯಲ್ಲಿ ಮೀನಾಕ್ಷಿಯ ಮದುವೆ ಅದ್ಧೂರಿಯಾಗಿ ನಡೆಯುತ್ತದೆ. ಅದಾದಮೇಲೆ ಅಣ್ಣನ ಆಗಮನದೊಂದಿಗೆ ಹಾರೈಕೆ. ಬಳಿಯೇ ಪಳಮುದಿರ್-
ಚೋಲೈ ಮತ್ತು ತಿರುಪ್ಪರಕುಂಡ್ರಂ ನಲ್ಲಿ ಶ್ರೀ ಮುರುಗನಿದ್ದಾನೆ.
ಮಧುರವಾದ ಮಧುರೆಯಲ್ಲಿ ಮನದನ್ನೆಯನ್ನು ಮದುವೆಯಾಗಿ ನಿಂತು ಮಕ್ಕಳಾದ ಭಕ್ತರನ್ನು ಮುಕ್ತಮನಸ್ಸಿನಿಂದ ಹರಸುತ್ತಿರುವ ಆತಾಯಿ ಮಮತೆಯ ಪ್ರತಿರೂಪವಲ್ಲದೇ ಮತ್ತೇನು,
ಅಲ್ಲಿರುವ ಸಾವಿರ ಕಾಲಿನ ಮಂಟಪದ ದರ್ಶನ ಸಾವಿರ ಜನ್ಮಗಳ ಫಲ. ತಾಯ ಸಾಮೀಪ್ಯಕ್ಕೆ ಮಜಲು. ಸಾಯುಜ್ಯಕ್ಕೆ ಹೆದ್ದಾರಿ
.
೪ಅ.ಕಂಚಿ ಕಾಮಾಕ್ಷಿ.
====================
ನಗರೇಷು ಕಾಂಚಿ’, ಇದು ಸಂಸ್ಕೃತದ ಒಂದು ಉಕ್ತಿ. ಪಲ್ಲವ ಸಾಮ್ರಾಜ್ಯದ ಮಹಾನ್ ದೇವಾಲಯಗಳ ಅಂದವನ್ನು ನೋಡಿದರೆ ದೇವನ
ವಿಶಾಲ ಕಾರುಣ್ಯ ತುಂಬಿದ ಹೃದಯದ ಭಾಸವಾಗುತ್ತದೆ.
ಸಂಯಮದ, ಸಹಿಷ್ಣುತೆಯ ಪರಮಾವದಿಯನ್ನೇ ಇಲ್ಲಿ ಕಾಣಬಹುದು. ಇಷ್ಟಾರ್ಥಗಳನ್ನು ಪೂರೈಸುವ ಶಿವನ ಆವಾಸಸ್ತಾನ ಶಿವ ಕಂಚಿಯಾದರೆ,
ಶ್ರೀ ವಿಷ್ಣುವಿನ ವಿಶಾಲ ಹೃದಯದ ತಾಣವಾಗಿ ವಿಷ್ಣುಕಾಂಚಿ ಕಂಗೊಳಿಸುತ್ತದೆ. ವರದರಾಜಸ್ವಾಮಿಯು ವಿರಾಜಮಾನನಾಗಿದ್ದರೆ, ಶ್ರೀ
ತ್ರಿವಿಕ್ರಮನ ಅಜಾನುಬಾಹು ಮೂರ್ತಿ ಆಗಂತುಕರನ್ನು ಆಶ್ಚರ್ಯಗೊಳಿಸುತ್ತದೆ. ಇಲ್ಲುರುವ ಸ್ವರ್ಣ ಹಲ್ಲಿಯನ್ನು ಮುಟ್ಟಿದರೆ ಯಾವುದೇ ಹಲ್ಲಿಯ
ದೋಷದ ಪರಿಣಾಮವಿರುವದಿಲ್ಲಾ ಎಂಬುದು ಪ್ರತೀತಿ.

ಆದರೆ, ಕಾಂಚಿಯ ನಿಜವಾದ ಆಕರ್ಷಣೆ ಕಂಚಿ ಕಾಮಾಕ್ಷಿ ಮತ್ತು ಕಾಂಚಿಯ ಮಠ. ಶ್ರೀ ಶಂಕರಾಚಾರ್ಯರು ಇಲ್ಲಿಗೆ ಆಗಮಿಸಿ, ತಾಯಿಯ
ಮಡಿಲಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದರು ಎಂಬುದು ಪ್ರತೀತಿ. ಅಂತೆಯೇ, ಇಲ್ಲಿ ಕಳೆದ ದಶಕದಲ್ಲಿ ತಪಶ್ಚರ್ಯೆಯಿಂದಲೂ, ತತ್ವ ನಿಷ್ಟೆಯಿಂದಲೂ, ಮಾನವ ಕಲ್ಯಾಣಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡು, ಶ್ರೀ ಶಂಕರರಂತೆ, ಮೂರು ಬಾರಿ, ಕಾಳ್ನಡಿಗೆಯಲ್ಲಿ, ಭಾರತ ಪ್ರವಾಸ-
ವನ್ನು ಕೈಗೊಂಡು, ಜನರ ಪ್ರತಿನಿಧಿಯಾಗಿ,ಜ್ಞಾನದೀವಿಗೆಯಾಗಿ, ಶಾಸ್ತ್ರ, ವೈದೀಕ ಕ್ರಮಗಳಲ್ಲಿ, ಅಧ್ವರ್ಯು ಎನಿಸಿ, ’ಮಾತೆಯ ಮಾತು ತಮ್ಮ
ಮಾತು, ಎಂದು, ತಾಯಿಯನ್ನು ಅಖಂಡವಾಗಿ ಆರಾಧಿಸಿ, ಆಕೆಯ ಅನುಗ್ರಹವನ್ನು ಮೈಗೂದಿಸಿಕೊಂಡು, ಮಮತೆಯ ಸ್ವರೂಪವಾಗಿ, ಸಮಸ್ಯೆಗಳ ಪರಿಹಾರ
 ಮಾರ್ಗವನ್ನು ತೋರಿ, ರಾಜಕೀಯದಲ್ಲೂ, ತಮ್ಮ ಪ್ರವೀಣ್ಯವನ್ನು ತೋರಿ, ದೇಶಭಕ್ತಿಯಲ್ಲಿ ತಮ್ಮ ಪಾಲನ್ನು ಸಲ್ಲಿಸಿ, ’ಕಾಂಚಿ ಪೆರಿಯವಾಳ್
ಎಂದುಖ್ಯಾತರಾದ, ಶ್ರೀ ಚಂದ್ರಶೇಖರಸ್ವಾಮಿಯವರ ಜೀವನವೇ ಒಂದು ಪಾವನ ಗಂಗೆ. ಅದರಲ್ಲಿ ಮಿಂದು ಬಂದವರಿಗೆ, ಬಂಧನ, ದುಃಖ
ಎಲ್ಲಿ.

ಅಂತೆಯೇ, ಅವರ ಉತ್ತರಾಧಿಕಾರಿಗಳಾದ ಶ್ರೀ ಜಯೀಂದ್ರ ಸರಸ್ವತಿಗಳು ಮಠದ ಏಳಿಗೆಗೆ ಬಹಳ ಶ್ರಮಿಸಿದ್ದಾರೆ. ಶೈಕ್ಷಣಿಕ ವೈದ್ಯ-
ಕೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇವರುಚಿನ್ನ ಪೆರಿಯವಾಳ್.’ ದೊಡ್ಡವರ ಪ್ರಿಯ ಶಿಷ್ಯರಾಗಿ, ತಮ್ಮನ್ನು ದೇವಿಯ ಅಹರ್ನಿಶಿ ಸೇವೆಗೆ
ಅರ್ಪಿಸಿಕೊಂಡವರು, ಶ್ರೀ ವಿಜಯೀಂದ್ರ ಸರಸ್ವತಿಯವರು. ಇವರ ಶಿಷ್ಯರುಬಾಲ ಪೆರಿಯವಾಳ್.’ಒಟ್ಟಿನಲ್ಲಿ, ತ್ರಿಮೂರ್ತಿಗಳು ಜಗನ್ಮಾತೆಯ ಸೇವೆಗೆ ತಮ್ಮನ್ನೇ
ಅರ್ಪಿಸಿಕೊಂಡಿದ್ದಾರೆ.  ಶ್ರೀ ಕಾಮಾಕ್ಷಿ ಎಂದರೆ, ಇಚ್ಚೆಗಳನ್ನು ಪೂರೈಸುವ ನೋಟವುಳ್ಳವಳು ಎಂದರ್ಥ. ಕಾಮೇಶ್ವರನಿಗೂ, ಅದೇ ಅರ್ಥ.
ಭಕ್ತಿಯ ತಾಯಿಯ ಬಳಿ ಬೇಡುವುದೇನನ್ನು. ಪ್ರೀತಿ, ಪ್ರೇಮ, ಮಮತೆ.ತಾಯಿ ಮಗನಲ್ಲಿ ಕೇಳುವುದು ಏನನ್ನು, ’ನಿಶ್ಚಲ ನಿರ್ಮಲ ಭಕ್ತಿ.
ಚಿನ್ನ ಗಟ್ಟಿಯನ್ನು ಪಡೆದವನು ಉಂಗುರವನ್ನು ಕೇಳಬಹುದೇ” ’ಕಲ್ಪ ವೃಕ್ಷವನ್ನು ಪಡೆದವನು ಕೇವಲ ಒಂದು ಹಣ್ಣನ್ನು ಕೇಳಬಹುದೇ.’
ಇದಕ್ಕೆ ಒಂದು ಉದಾಹರಣೆಯನ್ನು ಕೊಡಬಹುದು. ಒಬ್ಬ ವ್ಯಕ್ತಿಯು ಮರವನ್ನು ಕಡಿಯಲು ಕೊಂಬೆಯ ಮೇಲಿದ್ದನು. ಕೊಂಬೆಯಿಂದ ಬಿದ್ದರೆ ತಾನು  ಉಳಿಯುವುದಿಲ್ಲ
ಎಂಬ ಅರಿವು ಅವನಿಗಿಲ್ಲ. ಗಗನದಲ್ಲಿ  ಸಂಚರಿಸುತ್ತಿದ್ದ ಪಾರ್ವತಿ, ಜೊತೆಯಲ್ಲಿದ್ದ ಶ್ರೀ ಪರಮೇಶ್ವರನನ್ನು ಅವನನ್ನು ರಕ್ಷಿಸಲು
ಬೇಡಿದಳು. ಶ್ರೀ ಶಿವನು, ’ಅವನು ಬದುಕುವ ಯೋಗವಿಲ್ಲ. ಅಮ್ಮಾ ಎಂದರೆ ನೀನು ಕಾಪಾಡು, ಅಪ್ಪಾ ಎಂದರೆ ನಾನು ಕಾಪಾಡುತ್ತೇನೆ ಎಂದನು. ಆದರೆ
ಅವನುಅಯ್ಯೋಎಂದನು. ಅದಲ್ಲವೇ ಅವನ ಗ್ರಹಚಾರ.

ತಾಯಿಯ ಮುಂದೆ ನಿಂತಾಗ, ಅದಮ್ಯ ಕರುಣೆ ಕಾಣುತ್ತದೆ. ’ಆಕಣ್ಣುಗಳಲ್ಲಿ ತೀವ್ರ ಕಾಂತಿ, ಮನ ಸೆಳೆವ ಮಮತೆ. ’ ಕಂಡು ಕಂದನನ್ನು ಅಪ್ಪುವ
ಕಾರುಣ್ಯ. ಹಿಂದೆ ಹೋಗಲು ಒಲ್ಲದ ಆಕರ್ಷಣೆ. ಸಹಸ್ರನಾಮದ ಸವಿಜೇನು ಕರ್ಣಾಮೃತವಾಗಿರಲು, ಕುಂಕುಮ ತಾಯಿಯ ಅಡಿದಾವರೆಗಳನ್ನು ಅಲಂಕರಿಸಲು
ದಿವ್ಯಜ್ಯೋತಿಯ ಬೆಳಕು ತಾಯಿಯ ಹೊಳಪನ್ನು ಬೆಳಗುತ್ತಿರಲು, ಕೈ, ಕೈ ಅರಿಯದೇ ಮುಗಿಯುತ್ತಿರಲು, ಕಣ್ಣರಿಯದೆ ನೇತ್ರ-
ಧಾರೆ ಸುರಿಸುತ್ತಿರಲು, ಪಾದಗಳು ಜೋಡಿಸಿ, ಗೌರವ ಸೂಚಿಸಲು, ಮನವು ಮಾತೆಯಲ್ಲಿ ಐಕ್ಯವಾಗಿರಲು, " ಸಮಯವಲ್ಲವೇ ಅನಂದದ ಪರಮಾವಧಿ’.
ಆರತಿ, ತೀರ್ಥ, ಕುಂಕುಮಗಳ ವಿತರಣೆಯಾಗಲು, ಮತ್ತೆ ಮರಳಿ ಸಾಗಬೇಕೆಂಬ ಚಿಂತೆಯಿಂದ ಮನ  ನೊಂದಿರಲು, ’ನೀನೆಲ್ಲಿರುವಿಯೋ ಅಲ್ಲಿ ನಾನಿರುವೆ
ಎಂದು ಅಭಯವಿತ್ತು, ಕಳುಹಿಸುವ ಮಾತೆ, ಆಶ್ರಯದಾತೆ, ನಿತ್ಯ ವಂದಿತೆ. ಕಣ್ಣಿನ ಕಾರುಣ್ಯ ಕಂಠದಿಂದ ಹೊರಬಂದು, ಕಂಡಲ್ಲಿ ಬೇಡಲು
ಕಾರುಣ್ಯದಿಂದ ಕಾತುರದೊಡನೆ ತನ್ನ ಕುವರನನ್ನು ಕಾಯುವಳಲ್ಲವೇ ಕಾಮಾಕ್ಷಿ.

ನಾ ನಿರಕ್ಷರ ಕುಕ್ಷಿ. ನಿನೇ ಸರ್ವ ಶಕ್ತಿಎಂದು ಶರಣಾದಾಗ, ಪ್ರಾಣಪಕ್ಷಿ ತಾಯಿಯೊಂದಿಗೆ ಲೀನವಾಗದೆ ಇರುವುದೇ.


ಕಾಶಿ ವಿಶಾಲಾಕ್ಷಿ
==================
ಕಾಶಿ ಎಂದರೆ ಮೊದಲು ನೆನಪಿಗೆ ಬರುವುದು ಶ್ರೀವಿಶ್ವೇಶರ ಸ್ವಾಮಿ. ನಂತರ ಅನ್ನಪೂರ್ಣೇಶ್ವರಿ. ನಂತರ, ಪವಿತ್ರ ಗಂಗೆ ಮಾತೆ.
ಮತ್ತೆ ಮರೆಯಲಾಗದ ವಿಶಾಲ ಹೃದಯದ ಮಾತೆ ವಿಶಾಲಾಕ್ಷಿ. ಕಾಶಿ ಕ್ಷೇತ್ರಕ್ಕೆಮೋಕ್ಷಪುರಿ ಎಂಬ ಹೆಸರೂ ಉಂಟು. ಇಲ್ಲಿ ಮರಣಿಸಿದ
ವ್ಯಕ್ತಿಗೆ ಪುನರ್ಜನ್ಮವಿಲ್ಲ ಎಂಬುದು ಪ್ರತೀತಿ..
ಶ್ರೀ ವಿಶ್ವೇಸ್ವರಸ್ವಾಮಿಯನ್ನು ಯಾರು ಬೇಕಾದರೂ ಅರಾಧಿಸಬಹುದು. ಅಭಿಷೇಕ ಮಾಡುತ್ತಿರಲು ನೀರು ಚಿಮ್ಮಿ ಉಕ್ಕಿ ಬರುತ್ತಲೇ ಇರುತ್ತದೆ.
ಏಕೆಂದರೆ, ಅವನು ಕರುಣಾ ಸಮುದ್ರನಲ್ಲವೇ.
ಲೋಕಕ್ಷೇಮಕ್ಕಾಗಿ ಕಾಲಕೂಟವನ್ನುಂಡು ಜಗತ್ತಿಗೆ ಗಂಗೆಯನ್ನಿತ್ತ ನೀಲಕಂಠ. ವಿಶ್ವಾಮಿತ್ರ ಋಶಿಯು ರಾಜಾ ಹರಿಶ್ಚಂದ್ರನನ್ನು
ಶೋಧಿಸಿದ್ದು ಇಲ್ಲಿಯೇ. ಇನ್ನು, ಒಮ್ಮೆ ಚತುರ್ಮುಖ ಬ್ರಹ್ಮ್ಮನಿಗೆ ಐದು ಶಿರಗಳಿದ್ದುವು. ಒಮ್ಮೆ, ಬ್ರಹ್ಮನನ್ನು ಉಮೆ ಶಿವನೆಂದು ಬ್,ಹ್ರಮಿಸಿ
ಸಮೀಪಿಸಲು, ಕ್ರೋಧಗೊಂದ ಶಿವನು ಅವನ ಶಿರವನ್ನು ತರಿದ. ಅದು ಬ್ರಹ್ಮಕಪಾಲದಲ್ಲಿ ಬಿದ್ದಿತು. ಬ್ರಹ್ಮಹತ್ಯಾದೋಷದಿಂದ ನಿವೃತ್ತಿ
ಹೊಂದಲು ಶಿವ ಎಲ್ಲೆಲ್ಲಿ ಅಲೆದರೂ ಕಪಾಲ ತುಂಬಲೇ ಇಲ್ಲ. ಕಾಶಿಗೆ ಬಂದು ಶ್ರೀ ಅನ್ನಪೂರ್ಣೇಶ್ವರಿಯನ್ನು ಆಶ್ರಯಿಸಿದಾಗ, ಕಪಾಲವು
ತುಂಬಿತು. ವಿಶ್ವಕ್ಕೆ ಅನ್ನ ನೀಡುವ ಅನ್ನಪೂರ್ಣೆಯಲ್ಲವೇ ಮಾತೆ.
ಇನ್ನು ಗಂಗೆಗೆ ಬಂದಾಗ, ಗಂಗೆ ಯಾವಾಗಲೂ ಪವಿತ್ರಳು. ತನ್ನ ಹಿರಿಯರಿಗೆ ಸದ್ಗತಿಯನ್ನು ನೀಡಲು ಗಂಗೆಯನ್ನು ಧರೆಗೆ ಬರಲು ಬೇಡಿದಾಗ 
ತನ್ನ ಪ್ರವಾಹವನ್ನು ತಡೆಯಲು ಯಾರಿದ್ದಾರೆಎಂದಾಗ ಶಿವನು ಜಟೆಯಲ್ಲಿ ಗಂಗೆಯನ್ನು ಶಿರದಲ್ಲಿ ಸೆರೆ ಹಿಡಿದು ನಂತರ ಜಟೆಯಿಂದ
ಬಿಟ್ಟನು.
ಇಲ್ಲಿ ಸುಮಾರು ಇಪ್ಪೈತ್ತೈದು ಘಟ್ಟಗಳಿವೆ. ಮೊದಲು ಪ್ರಯಾಗದಲ್ಲಿ ಕಾರ್ಯವನ್ನು ಮುಗಿಸಿಕೊಂಡು, ಕಾಶಿಯಲ್ಲಿ ಮುಂದುವರಿಸಿ, ಗಯಾದಲ್ಲಿ
ಪರಿಸಮಾಪ್ತಿಯಾಗಲು ಮುಕ್ತಿ ಶತಸ್ಸಿದ್ಧ ಎಂದು ಪ್ರತೀತಿ. ಗಂಗೆಯಲ್ಲಿ ಮಿಂದವರೆಲ್ಲರೂ ಪವಿತ್ರರಾಗುವರೇ ಎಂದರೆಇಲ್ಲ.’.ಶಿವ-
ಪಾರ್ವತಿಯರು ವೃದ್ಧ ದಂಪತಿಗಳ  ವೇಷ ಧರಿಸಿ  , ಶಿವನು ಅಶಕ್ತನಂತೆ ಮಲಗಿರಲು, ’ಶಿವನನ್ನುಎತ್ತುವುದಕ್ಕೆ ಸಹಾಯ ಮಾಡ
ಯಾರಾದರೂ ಮುಂದೆ ಬರಬಹುದುಆದರೆ, ಯಾರೂ ಪಾಪ ಮಾಡಿರಬಾರದು, ಎಂದು ಉಮೆ  ನಿಯಮ ತಿಳಿಸಿದಳು. ಯಾರೂ ಮುಂದೆ ಬರಲಿಲ್ಲ. ಒಬ್ಬ ಅಸ್ಪೃಷ್ಯನು ಪಾಪ ತನಗೆ ಬರಲಿ ಎಂದು ಸಹಕರಿಸಿದನು. ’ಮುಗ್ದ ಮನಸ್ಸೇ ಮುಖ್ಯ.’
ಪ್ರಯಾಗ, ಕಾಶಿ, ಗಯಾಗಳ ತ್ರಿವೇಣಿ ಸಂಗಮದಲ್ಲಿ ನಡೆಸಿದ ಪಿತೃಕರ್ಮಗಳಿಂದ ಅವರ ಉದ್ದಾರದೊಡನೆ ಕರ್ತನ ಮುಂದಿನ ತಲೆಮಾರುಗಳೂ
ಸುಖವಾಗಿ ಇರಬಹುದೆಂದು ದೈವ ವಾಕ್ಯ.
ಇನ್ನು ವಿಶಾಲಾಕ್ಷಿಯ ವಿಷಯಕ್ಕೆ ಬಂದಾಗ, ’ವಿಶಾಲ ಎಂಬುದು ಯಾವುದು’. ನೆನಪಿಗೆ, ಗಗನ, ಭೂಮಿ, ವಾಯು, ಅಗ್ನಿ, ಸೂರ್ಯ ಇವರ ದ್ರುಷ್ಟಿಯೇ  
ವಿಶ್ವ ದೃಷ್ಟಿ. ಗುರಿ ವಿಶ್ವ ನಲ್ಮೆ. ಅವರಿಗೆಲ್ಲಿದೆ ವಿರಾಮ. ’ಯಾವ ಭೇದ ಭವಗಳಿಲ್ಲದೆ, ಅವಿರತವು, ಅವಿಶ್ರಾಂತವಾಗಿ ತಮ್ಮ
ಕರ್ತವ್ಯವನ್ನು ನಿರ್ವಹಿಸುವರು.
ಭೂಮಿಯಂತಹ ತಾಳ್ಮೆ, ಅಗ್ನಿಯಂತಹ ತೇಜಸ್ಸು, ಗಗನದಂತಹ ವೈಶಾಲ್ಯ, ಸೂರ್ಯನಂತೆ ಜ್ಞಾನದೀವಿಗೆಯನ್ನು ಬೆಳಗಿ, ವಾಯುವಿನಂತೆ 
ಕಾರುಣ್ಯಗಾಲಿಯನ್ನು ಪಸರಿಸುತ್ತಾ, ಭಕ್ತರ ಬವಣೆಯನ್ನು ನೀಗಿಸಿ, ಭಕ್ತರ ಭಕ್ತಿಗೆ ಮೆಚ್ಚಿ ಬಾಳನ್ನು ಭದ್ರ ಬುನಾದಿಯೊಂದಿಗೆ
ಭಕ್ತರ ಭವಿಷ್ಯವನ್ನು ಭವ್ಯವಾಗಿಸುವ ಭಕ್ತವತ್ಸಲೆ.ಒಮ್ಮೆ ಶಂಕರರು ಹಸಿವಾದಾಗ ಮಾತೆಯನ್ನು ಆಹಾರ ಬೇಡಿದರಂತೆ. ತಾವು ಯತಿಯೆಂಬ ಅರಿವಾಗಿ, : ವೈರಾಗ್ಯವನ್ನುಬೇಡಿದರಂತೆ.
ನಾವು ಅದರೊಂದಿಗೆ ಅನುಗ್ರಹವನ್ನು ಬೇಡುತ್ತಾ ಮಾತೆ ವಿಶಾಲಾಕ್ಷಿಯ ವಿಶಾಲ ಹೃದಯದಲ್ಲಿ ಐಕ್ಯವಾಗೋಣ.

ದಾಕ್ಷಾಯಿಣಿ
----------
ದಕ್ಷ ಬ್ರಹ್ಮನ ಮಗಳಾದ ದಾಕ್ಷಾಯಿಣಿ ಶಿವನನ್ನೇ ವರಿಸಬೇಕೆಂದು ಸಂಕಲ್ಪಿಸಿ, ಘೊರ ತಪಸ್ಸನ್ನಾಚರಿಸಿ, ಪರಮನನ್ನೇ ಫಡೆದಳು.
 ಆದರೆ ದಕ್ಷನು ಮಾಡಿದ ಯಾಗದಲ್ಲಿ ಶಿವನು ಬೇಡವೆಂದು, ಶಿವನು ಸಾಮನ್ಯ ವ್ಯಕ್ತಿ ಎಂದು ನೆನೆದು ಆಹ್ವಾನ ನೀಡಲಿಲ್ಲ.  ಶಿವನು ಬೇಡವೆಂದರೂ
ಆಸೆಯಿಂದ ಬಂದ ಉಮೆಗೆ ನಿರಾಸೆ ಕಾದಿತ್ತು.ಅಳಿಯನನ್ನು ಕೇವಲವಾಗಿ ನಿಂದಿಸಿದ್ದನ್ನು ತಾಳಲಾರದೆ, ಉಮೆಯು ಅಗ್ನಿಪ್ರವೇಶ ಮಾಡಿದಳು.
ಕ್ರೋಧಗೊಂಡ ಶಿವನು ತನ್ನ ಗಣಗಳೊಂದಿಗೆ ನುಗ್ಗಿ, ಯಗಶಾಲೆಯನ್ನೂ, ದಕ್ಷನ ಸೈನ್ಯವನ್ನೂ, ನಿರ್ಮೂಲಗೊಳಿಸಿ, ದಕ್ಷನನ್ನು ಸಂಹರಿಸಿದನು. ನಂತರ, ಪತ್ನಿಯ ಪ್ರಾರ್ಥನೆಗೆ , ಶಿವನು ಮೇಕೆಯ ತಲೆಯನ್ನಿಟ್ಟು ದಕ್ಷನನ್ನು ಬದುಕಿಸಿದನು. ಆದ್ದರಿಂದ, ಶ್ರೀ ರುದ್ರ-ಚಮಕ 
ಪಟಿಸುವಾಗ ಚಮಕದಲ್ಲಿ, ’ಮೇ, ಮೇ, ಎಂದು ಪಾರಾಯಣ ಮಾಡುವುದು ವಾಡಿಕೆಯಲ್ಲಿದೆ.
ದಕ್ಷನು ಪ್ರತಿಭಾವಂತನಾದರೂ, ಅಹಂಕಾರದಿಂದ, ಅದಕ್ಷನಾದನು. ಅದು ಜಗತ್ತಿನ ಹೆಣ್ಣು ಮಕ್ಕಳಿಗೆ ಒಂದು ಪಾಠವಾಯಿತು. ಮದುವೆಯಾದ 
ಹೆಣ್ಣು ಗಂಡನ ಮನೆಯವರೊಂದಿಗೆ ಹೊಂದಿಕೊಳ್ಳಬೇಕು. ಅಡಿಗಡಿಗೆ ತವರು ಮನೆಗೆ ಹೋಗುವುದರಿಂದ ಉಭಯ ಕುಟುಂಬಗಳ ಗುಟ್ಟು-ರಟ್ಟುಗಳು
ಮನಸ್ತಾಪಕ್ಕೆ ಎಡೆ ಮಾಡಿಕೊಡುತ್ತದೆ. ಗಂಡನ ಮನೆಯವರನ್ನು ಹಿಯಾಳಿಸಿದರೆ ಅದರ ಪರಿಣಾಮ ಅವರ್ಣನೀಯ.ಸಭೆ-ಸಮಾರಂಭಗಳಿಗೆ ಹೋದರೆ ತಪ್ಪಲ್ಲ.ತನ್ನ ಕುಟುಂಬದವರೊಂದಿಗೆ ಹೋಗಿ, ಭಾಗವಹಿಸಿ ಬಂದರೆ ತಪ್ಪಲ್ಲ. ಅನಾವಶ್ಯಕ ಮಾತು,
ವಿಚಾರ ವಿನಿಮಯಕ್ಕೆ ಕಡಿವಾಣ ಹಾಕಿ, ಉಭಯ ಕುಶಲೋಪರಿಯೊಂದಿಗೆ ಮುಗಿಸಿಕೊಂಡರೆ ಬಾಳು ಸುಗಮ.ಇಲ್ಲದಿದರೆ ಕದಡುವುದುಸಂಸಾರದಸರಿಗಮ.’

೪ದ್.ಗಿರಿಜಾ ಕಲ್ಯಾಣ.
====================
ಕಾಳಿದಾಸನ ಕುಮಾರಸಂಭವದಲ್ಲಿ ಇದರ ಉಕ್ತಿಯಿದೆ. ಪಾರ್ವತಿ ಹಿಮವಂತನ ಮಗಳು. ಚಿಕ್ಕಂದಿನಿಂದಲೂ ಶಿವನನ್ನೇ ಪತಿಯಾಗಿ ಪಡೆಯಲುನಿರ್ಧರಿಸಿದ್ದಳು. ಅದಕ್ಕೆ ಘೋರ ತಪಸ್ಸನ್ನು ಕೈಗೊಂಡು ಪಂಚಾಗ್ನಿಯ ನಡುವೆ ನಿಂತು, ತಪವನ್ನಾಚರಿಸಿದಳು. ಪರೀಕ್ಷಿಸಲು ಶಿವ ವೃದ್ಧ ರೂಪದಲ್ಲಿ ಬಂದು, ’ಶಿವನಲ್ಲಿ ಅಂತಹ ವಿಶೇಷವೇನಿದೆ ಎಂದು ಕೇಳಿದನು. ’ಅವನು ಭಸ್ಮಧಾರಿ, ಯತಿ, ಸ್ಮಶಾಣವಾಸಿ, ಗಜಚರ್ಮಾಂಬರವನ್ನು
ಧರಿಸಿ ಯೋಗಿಯಂತೆ ಇರುವವನುಎನ್ನಲು, ಕ್ರೊಧಗೊಂಡ ಉಮೆ ಉದ್ರೆಕಗೊಳ್ಳಲು, ತನ್ನ ನಿಜಸ್ವರೂಪವನ್ನು ತೋರಿಸಿದ ಶಿವ. ನಂತರ ನಡೆದಗಿರಿಜಾ ಕಲ್ಯಾಣ ಸರ್ವ ವಿದಿತ.
ಹಿನ್ನಲೆ; ರಕ್ಕಸರ ಆರ್ಭಟ ಹೆಚ್ಚಾಗಿ, ಮುನಿಗಳ ಯಾಗಕ್ಕೆ, ತಪಶ್ಚರ್ಯೆಗೆ, ತಡೆಯುಂಟಾಯಿತು.ಇವರನ್ನು ತಡೆಯಬಲ್ಲ ಒಬ್ಬ ವ್ಯಕ್ತಿಯ ಆವಿರ್ಭಾವದ ಅಗತ್ಯವಾಯಿತು.
ಸಮಯಕ್ಕೆ ಸನತ್ಕುಮಾರ ಋಷಿಗಳು ಧ್ಯಾನದಲ್ಲಿದ್ದಾಗ, ರಾಕ್ಷಸರನ್ನು ತಡೆಯುವ ಹಂಬಲ ಅತಿಯಾಯಿತು. ಅದು ಶಕ್ತಿ ಸಂಭವಕ್ಕೆ ಶಿವ-ಪಾರ್ವತಿಯರ ವಿವಾಹ ಅನಿವಾರ್ಯವಾಯಿತು.  ಇದಕ್ಕೆ ನಾಂದಿಯಾಗಿ ಮನ್ಮಥನು ನಾಟ್ಯವಾಡಿ, ಶಿವನಿಗೆ ಪುಷ್ಪಬಾಣ ಬಿಟ್ಟಾಗ, ಕ್ರೋಧದಿಂದ
ಶಿವನು ಹಣೆಗಣ್ಣನ್ನು ತೆರದು, ಆತನನ್ನು ಭಸ್ಮ ಮಾಡಿದ. ಅವನ ಪತ್ನಿ ರತಿಯ ಮೊರೆಗೆ ಕರಗಿ,  ಅವನನ್ನು ಅನಂಗನಾಗಿರಲು ಅನುಮತಿಯಿತ್ತ. ಅನಂಗನಾಗಿಯೇ, ಅವನ ಉಪಟಳ ಮಾನವರಿಗೆ ಸಹಿಸಲಸಾಧ್ಯ. ತಾಪಸಿಯಾಗಿರುವವರಿಗೂ ಬಿಡದ ಕಾಮನ ಪ್ರಭಾವ ಅವರ್ಣನೀಯ.
ಗಿರಿಜಾ ಕಲ್ಯಾಣವಾದ ಮೇಲೆ ಶಿವ-ಪಾರ್ವತಿಯರು ಸನತ್ಕುಮಾರರನ್ನು ತಮ್ಮ ಕುಮಾರನಾಗಿ ಜನಿಸಲು ಕೇಳಿಕೊಳ್ಳುತ್ತಾರೆ. ತಾನು, ಅಯೋನಿಜನಾಗಿಜನಿಸುವೆನೆಂದು ತಿಳಿಸಿ, ಶಿವನ ಹಣೆಗಣ್ಣಿನಿಂದ ಹೊರಬಂದ ತೇಜಸ್ಸನ್ನು ಅಗ್ನಿದೇವ ಭರಿಸಲಾಗಲಿಲ್ಲ. ಅದನ್ನು ಅಗ್ನಿದೇವನುಶರವಣಪೊಯ್ಗೈ ನದಿಯಲ್ಲಿ ಬೀಳಿಸಲು, ಶಾಂತವಾಗಿ ಆರು ಮಕ್ಕಳಾಯಿತು. ಕೃತ್ತಿಕಾ ಕನ್ಯೆಯರು ಅವುಗಳನ್ನು ಪೋಷಿಸಲು, ದೇವಿ ಪಾರ್ವತಿಯು ಒಗ್ಗೂಡಿಸಿದಳು.
ಶಕ್ತ್ಯಾಯುಧವನ್ನಿತ್ತು ಶಕ್ತಿಹಸ್ತನಾಗಿಸಿದಳು. ನಾರದನಿತ್ತ ಮಾವಿನ ಹಣ್ಣಿನ ಪಂದ್ಯದಲ್ಲಿ, ತಂದೆ ತಾಯಿಯರನ್ನು ಸುತ್ತಿ ಗಣಪ ಗೆಲ್ಲಲು,
ಕೋಪಗೊಂಡ ಮುರುಗ ಮಯೂರವನ್ನೇರೆ ಜಗವನ್ನು ಸುತ್ತಿ ಪಳನಿಯಲ್ಲಿ ನಿಂತನು. ಬ್ರಹ್ಮನನ್ನು ಪ್ರಣವದ ಅರ್ಥ ತಿಳಿದಿಲ್ಲವೆಂದು ಬಂದಿಸಿಟ್ಟ.
ತ್ರಿಮೂರ್ತಿಯರ ಪ್ರಾರ್ಥನೆಗೆ ಮಣಿದು ಮುಕ್ತನಾಗಿಸಿದ. ತಂದೆಗೆ ಪ್ರಣವದ ಅರ್ಥವನ್ನು ಭೊಧಿಸಿ ತಂದೆಗೇ ಗುರುವಾದನು. ಆರು ಕಡೆಯಲ್ಲಿ ನಿಂತು  ಆರುಮುಗನಾದನು. ನಂತರ, ದೇವಸೇನಾಪತಿಯಾಗಿ, ಶೂರಪದ್ಮನನ್ನು ಕೊಂದು, ’ಕುಕ್ಕುಟ ಧ್ವಜ ಮತ್ತು ಮಯೂರವಾಹನನಾದನು.’
ವಳ್ಳಿ ದೇವಯಾನಿಯರನ್ನು ವರಿಸಿ, ಕಲ್ಯಾಣ ಮುರುಗನಾದನು. ಶಷ್ಟಿ ಪ್ರಿಯನೆನಿಸಿ, ಸುಬ್ರಮಣ್ಯದಲ್ಲಿ ನೆಲೆಸಿ ಭಕ್ತರ ಬವಣೆಗಳನ್ನುಹರಿಸುತ್ತಾ, ಶ್ರೀ ವಾಸುಕಿ ಮತ್ತು ಸುಬ್ರಮಣ್ಯನ ರೂಪದಲ್ಲಿ ಕಂಗೊಳಿಸುತ್ತಿರುವನು.
ನಮ್ಮ ಶರೀರದಲ್ಲಿ, ಧ್ಯಾನದ ಉನ್ನತ ಸ್ಥಾನವಾದ ಕುಂಡಲಿನಿ ರೂಪದಲ್ಲಿದ್ದು, ನಿಯಂತ್ರಿಸುತ್ತಿರುವನು.
ಬ್ರಹ್ಮ ಜ್ಞಾನದ ಪ್ರತಿರೂಪವೇ ಶ್ರೀ ಸುಬ್ರಮಣ್ಯ. ತಮಿಳುನಾಡಿನ ಆರಾಧ್ಯದೆವವಾದ ಶ್ರೀ ಮುರುಗನು ಪಟ್ಟಿನತ್ತಾರ್, ಅರುಣಗಿರಿನಾತರ ಆರಾಧ್ಯ ದೈವ. ಶ್ರೀ ಶಂಕರಭಗವತ್ಪಾದರಿಂದ ತಿರುಚೆಂದೂರಿನಲ್ಲಿಶ್ರೀ  ಸುಬ್ರಮಣ್ಯಸ್ತೋತ್ರರಚನೆಯೊಂದಿಗೆ ಅರಾಧಿಸಲ್ಪಟ್ಟ ದೇವರು.
ಶಿವ ಎಂದರೆ ಮಂಗಳ ಸ್ವರೂಪ. ಉಮೆ ಎಂದರೆ ಶಕ್ತಿ ಸ್ವರೂಪ. ಗಣಪತಿಯು ವಿಘ್ನಹಾರಕ. ಜ್ಞಾನ ಪಂಡಿತ ಮುರುಗ, ಮಂಗಳ ಕಾರಕ.
ಕುಟುಂಬದ ಅವಿರತ ಸ್ಮರಣೆ, ವಿಶ್ವ ಜನತೆಯ ನಲ್ಮೆಗೆ ಪ್ರೇರಕ, ಉತ್ತೇಜಕ.

-.
====
ಶ್ರೀ ಕನ್ಯಾಕುಮಾರಿ.
====================
ಭಾರತದ ಶ್ರೀರಕ್ಷೆಯಾಗಿ, ಮೂರು ಕಡೆ ಸಮುದ್ರಗಳು ಇದ್ದರೆ, ಮತ್ತೊಂದೆಡೆ, ವಿಶಾಲವಾದ ಮುಗಿಲೆತ್ತರದ ಹಿಮಾಲಯಾ ಪರ್ವತವಿದೆ.
ಏನಿದರರ್ಥ.

ಸಮುದ್ರ ಯಾವಾಗಲೂ ವಿಶಾಲ. ಮೇಲಿಂದ ಬೀಳುವ ಮಳೆಯನ್ನು ಸ್ವಾಗತಿಸಿ, ದ್ರವರೂಪವಾಗಿ ಹರಿದು, ತೊರೆ, ಕೆರೆ, ನದಿ ರೂಪದಲ್ಲಿ
ಹರಿದು ಸಾಗರವನ್ನು ಸೇರುತ್ತದೆ.
ಅಲೆ ಅಬ್ಬರವಾಗಿ ಬಂದರೂ, ತೀರದಲ್ಲಿ ಬಂದು ಅಪ್ಪಳಿಸುತ್ತದೆ. ಮುಳುಗಿದರೆ, ಮೂರುಸಲ ಮೇಲೆತ್ತಿ ತನ್ನವಳನ್ನಾಗಿಸಿಕ್ಕೊಳ್ಳುತ್ತದೆ.
ಹಿಮಾಲಯವು ಮುಗಿಲೆತ್ತರಕ್ಕೆ ಬೆಳದರೂ, ಮಂಜಿನಿಂದ ಶೋಭಿಸುತ್ತಾ, ಶಿವನ ಆವಾಸಸ್ತಾನವಾಗಿದೆ.
ಆದ್ದರಿಂದಲೇ ಮಾನವನ ಹೃದಯವು ವಿಶಾಲವಾಗಿರಬೇಕು. ಅಲೆಗಳು ಬಂದಂತೆ ಕಷ್ಟಗಳು ಬಂದು ಅಪ್ಪಳಿಸಿದರೂ, ಛಲದಿಂದ ನಿಂತಾಗ
ನಮಸ್ಕರಿಸಿ ಹಿಂದಿರುಗುತ್ತದೆ. ಅಂತೆಯೇ, ಸಮುದ್ರವು ಅನೇಕ ಜಲರಾಶಿಗಳಿಗೆ ಆಶ್ರಯವಿತ್ತಂತೆ, ಮನಾವನನ್ನು ನಂಬಿ ಅನೇಕರು ಆಶ್ರಯಿಸುತ್ತಾರೆ. ನಾವಿಕನು ಹಡಗನ್ನು ಚಾಲೂಕಿನಿಂದ ನಡೆಸಿ ದಡವನ್ನು ಸೇರಿಸುವಂತೆ, ಸಂಸಾರವೆಂಬ ದೋಣಿಯಲ್ಲಿ ಸಾಗಲು ಭಗಂತನನ್ನುನಂಬಿದರೆ ಕರೆಯನ್ನು ಸೇರಬಹುದು.
ಹಿಮವತ್ ಪರ್ವತವು ಮುಗಿಲೆತ್ತರಕ್ಕೆನಿಂತಂತೆ, ಮಾನವನ ಗುರಿಯು ಉನ್ನತವಾಗಿರಬೇಕು. ಅದರಂತೆ ಹ್ರುದಯವು ಶುಭ್ರವಾಗಿರಬೇಕು.
ಲೋಕಕ್ಷೇಮಕ್ಕೆ ಶಿವನು ವಿಷವನ್ನುಂಡು ಗಂಗೆಯನ್ನಿತ್ತಂತೆ, ನಮ್ಮ ನೋವುಗಳನ್ನು ನುಂಗಿಕ್ಕೊಂಡು, ಜಗತ್ತಿನ ಒಳಿತಿಗೆ ಶ್ರಮಿಸಬೇಕು.
ವಿವಾಹವಾದ ಶಕ್ತಿಯರನ್ನು ಅನೇಕವಾಗಿ ನೋಡಬಹುದು. ಆದರೆ, ವರನಿಗಾಗಿ ಕಾದು ನಿಂತ ಶಕ್ತಿ ಕಾಣುವುದು ಅಪರೂಪ. ಇಲ್ಲಿ ನೆಲೆಸಿರುವ
ಕನ್ಯಾಕುಮಾರಿ ಮಾತೆಯು ಭಾರತವನ್ನು ರಕ್ಷಿಸಲು, ಸೃಷ್ಟಿ, ಸ್ಥಿತಿ ಮತ್ತು ಲಯವೆಂಬ ಮೂರು ಕ್ರಿಯೆಗಳನ್ನು ಮೂರು ಸಮುದ್ರಗಳಿಗೆ
ಹಂಚಿದ್ದಾಳೆ. ಶ್ವೇತ ರೂಪದಲ್ಲಿ ಬೆಳಗಿ, ಹುಸಿನಗೆಯನ್ನು ತೋರುತ್ತಾ, ನಾಸಿಕದಲ್ಲಿ ಧರಿಸಿದ ಮೂಗುಬೊಟ್ಟಿನ ಹೊಳಪು ನಾವಿಕರಿಗೆ
ದಾರಿದೀಪವಾಗಿದೆ. ನಮಗೂ ಬೆಳಕು ಕೊಡುತ್ತದೆ.  ಇಲ್ಲಿಯೇ, ಶ್ರೀ ರಾಮಕೃಷ್ಣರ ಪರಮಶಿಷ್ಯರಾಗಿ ವಿದೇಶದಲ್ಲಿ ಅಧ್ಯಾತ್ಮ ಡಿಂಡಿಮ
ವನ್ನು ಬೆಳಗಿದ ಶ್ರೀ ವಿವೇಕಾನಂದರ ಧೀಮಂತ ಪ್ರತಿಮೆಯಿದೆ. ಶ್ರೀ ತಿರುವಳ್ಳುವರ್ ಅವರ ಪ್ರತಿಮೆಯೂ ಇದೆ. ಯಾವ ವಿದೇಶೀಯರು ಭಾರತದ ಮೇಲೆ ಧಾಳಿ ನಡೆಸಲು ಮೂರು ಬಾರಿ ಯೋಚಿಸಬೇಕಾಗುತ್ತದೆ ಭಾರತೀಯರಾಗಿ ಹುಟ್ಟಿದ ಪ್ರತಿ ಪ್ರಜೆಯೂ, ಕ್ಷೇತ್ರಕ್ಕೆ ಬಂದು, ಅಂದವನ್ನು ಕಾಯುವ ಪಣ ತೊಟ್ಟು, ತನ್ನ ಪಾಲಿನ ಕರ್ತವ್ಯವನ್ನು ಮಾಡಿದರೆ ಅದೇ ತಾಯಿಗೆ ಸಲ್ಲಿಸುವ ಬೃಹತ್ ಸೇವೆ.
ಕರ ಮುಗಿದು, ಕಣ್ಮುಚ್ಚಿ ಧ್ಯಾನಿಸಿ, ನ್ಯಾಯಕ್ಕೆ ಹೋರಾಡುವ ಯೆಂದು ಬೇಡಿ, ಕುಳಿತಲ್ಲೇ, ಕಣ್ಮುಚ್ಚಿ ಧ್ಯಾನಿಸುತ್ತಾ, ಮಾನವತೆಯನ್ನು ವಿಶ್ವಕ್ಕೆಲ್ಲಾ ಪಸರಿಸಿ, ಮುದಗೊಂಡು, ರಿಕ್ತಹಸ್ತದಿಂದ ಸಹಾಯ ಗೈದರೆ, ಬಡತನ, ದಾರಿದ್ರ, ನೋವು, ಎಲ್ಲವೂ ಹೇಳ ಹೆಸರಿಲ್ಲದಂತೆ ಮಾಯವಾಗಿ, ಎಲ್ಲೆಲ್ಲೂ  ಸಂತಸದ ಸಾಗರವೇ  ಗೋಚರವಾಗುವುದು.

-.ಮೈಸೂರು ಚಾಮುಂಡೇಶ್ವರಿ
=============================
ಮಹಿಷ್ ಎಂದರೆ ಎಮ್ಮೆ.ಅದು ನಿರಾಸಕ್ತಿಯ ಯತಿಯೆಂತೆ ನೆಮ್ಮದಿಯಾಗಿರುವುದು. ಜಲದಲ್ಲಿದ್ದಾಗ ಯೋಗಿಯಂತೆ ಕಣ್ಮುಚ್ಚಿರುವುದನ್ನು ಕಾಣಬಹುದು.  ಪರೋಪಕಾರ ದೃಷ್ಟಿಯಿಂದ ಮಾನವರಿಗೆ ಹಾಲನ್ನು ಕೋಡುತ್ತದೆ. ರಸ್ತೆಯಲ್ಲಿ ಅಡ್ಡ ನಿಂತು ಎಷ್ಟೇ ಶಬ್ದ
ಮಾಡಿದರೂ ನಿರ್ಲಿಪ್ತವಾಗಿರುತ್ತದೆ. ಅದು ಸಮಚಿತ್ತಕ್ಕೆ ಒಂದು ಉದಾಹರಣೆ. ಇನ್ನು ಯಮನ ವಾಹನ ಮಾನವನ ಬಾಳಿನಲ್ಲಿ ಕೊನೆ ಯಾವಾಗ ಬರುವುದು ಎಂಬುದು ಗೊತ್ತಿಲ್ಲ. ಅದರ ಭಯ ಮಾನವನಿಗೆ ಇದ್ದೇ ಇರುತ್ತದೆ. ಆದ್ದರಿಂದ,’ ನಿದಾನವಾಗಿ ಅಲೋಚಿಸಿ,. ನಿರ್ಮಲಚಿತ್ತನಾಗಿ,
ಭಗವಂತನ ಧ್ಯಾನದಲ್ಲಿ ಇದ್ದರೆ, ಭಯವಿಲ್ಲ.’
 ಈಗಿನ ಮೈಸೂರು ಅಂದಿನ ಮಹಿಷೂರು. ವಿಜಯನಗರದ ಸಾಮ್ರಾಜ್ಯದ ಅರಸರ ಆಳ್ವಿಕೆ ಮುಂದುವರಿದು, ಶ್ರೀ ರಂಗಪಟ್ಟಣದಿಂದ ಮೈಸೂರಿಗೆ ಸುಮಾರು ಹದಿನೆಂಟರ ದಶಕದಲ್ಲಿ ಬಂದಿತು.ಧರೆಗೆ ಸ್ವರ್ಗ ಬಂದಿಳಿದಂತೆ ಭಾಸವಾಗುವ ನಗರ ಸೌಂದರ್ಯದ ಖನಿ. ಮೈಸೂರಿನ ಅರಮನೆಯನ್ನು ಒಂದು ಅಮರಾವತಿ ಎನ್ನಬಹುದು.
ನಾವು ಚಿಕ್ಕ ವಯಸಿನಲ್ಲಿ ಕಂಡ ದಸರ ಅವಿಸ್ಮರಣೀಯ. ಹತ್ತು ದಿನಗಳ ನಗರದ ತಳಿರು ತೋರಣ, ಜನರ ಉತ್ಸಾಹ, ಅರಮನೆಯ ವಿದ್ಯುತ್ದೀಪಾಲಂಕಾರ, ಅರಮನೆಯ ಆಯುಧ ಪೂಜೆ, ದರ್ಬಾರ್, ವಿಜಯದಶಮಿಯ ಮೆರವಣಿಗೆ, ಇಂದೂ  ಕಣ್ಣಿಗೆ ಕಟ್ಟಿದಂತಿದೆ. ಬಳಿಯಿರುವ ಕನ್ನಂ-
ಬಾಡಿ ಕಟ್ಟೆ ಕಾವೇರಿಯು ರೈತರಿಗೆ ಕೊಟ್ಟಿರುವ ಊಟದ ತಟ್ಟೆ.’
ಜಗತ್ಸುಖವು ಅಳಿಯಬಹುದು. ಅಧ್ಯಾತ್ಮ ಅಳಿಯುವದಿಲ್ಲ. ರಾಜಧನರದ್ದತಿಯಿಂದ ದಸರೆ ನಿರೀಕ್ಷಿತ ಮಟ್ಟಕ್ಕೆ ನಡೆಯುತ್ತಿಲ್ಲದಿದ್ದರೂ,
ಅಧ್ಯಾತ್ಮ ಕೇಮ್ದ್ರವಾದ ಶೃಂಗೇರಿ ಮತ್ತು ಇತರ ಸ್ಥಾಳಗಳಲ್ಲಿ, ನವರಾತ್ರಿಯಲ್ಲಿ, ಶ್ರೀ ಗುರುಗಳ ನೇತ್ರುತ್ವದಲ್ಲಿ, ಅದ್ಧೂರಿಯಿಂದ ನಡೆಯುತ್ತದೆ. ಯೊಗಕ್ಶೇಮದ ಸಲುವಾಗಿ, ನಡೆಯುವ ಜಗನ್ಮಾತೆಯ ಸೇವೆ ಆರಾಧನೆ, ಯಜ್ಞ, ಹೋಮ- ಹವನಗಳು, ಅಮರ. ನಿರಂತರ ಶ್ರೇಯಸ್ಕರ.
ತಾಯಿಯ ರಕ್ಷಣೆಯಲ್ಲಿ ಮಕ್ಕಳು ಯಾವುದಕ್ಕೂ ಚಿಂತಿಸುವಿದಲ್ಲ. ಅವಳ ರಕ್ಶಣೆಯಲ್ಲಿ ನೆಮ್ಮದಿಯಿಂದ ಇರುತ್ತವೆ. ’ಕಷ್ಟ ಕಾರ್ಪಣ್ಯಗಳು
ತಾಯಿಯ ದಯೆಯಿಂದ ಕರಗಿ ಹೋಗುತ್ತವೆಯೆಂಬ ನಂಬಿಕೆ.ಕಷ್ಟ, ನೋವು, ನಲಿವು, ಕ್ಷಾಮ, ದರೋಡೆ, ಹತ್ಯೆ, ಏನೇ ಇರಲಿ, ಎಲ್ಲಾ ಮಹಿಷನನ್ನೂ,ತಾಯಿ, ಚಂಡ, ಮುಂಡರನ್ನು ಕೊಂದದ್ದರಿಂದ,ತಾಯಿ ಚಾಮುಂಡಿ, ಚೆಂಡಾಡಿ, ಮಕ್ಕಳಿಗೆ ಚಿರಶಾಂತಿಯನ್ನು ಕೊಡುತ್ತಿದಾಳೆ. ಸಿಂಹರಾಜನ

ಮೇಲೆ ಕುಳಿತು, ಶೂಲಪಾಣಿಯಾಗಿ, ಮಹಿಷನನ್ನು ಮೆಟ್ಟಿ ನಿಂತ ಚಾಮುಂಡಿಯ ಬೆಟ್ಟ ಇಂದೂ ಎಂದೆಂದೂ ಪವಿತ್ರ. ಮಹಿಷ-ಜಡತೆ, ಸಿಂಹ-
ಅಹಂಕಾರ, ಇವೆರಡನ್ನೂ ಹತ್ತಿಕ್ಕಿ, ಅವನನನ್ನು ಉದ್ದಾರಗೊಳಿಸಲು, ತನ್ನಲ್ಲಿ ಐಕ್ಯವಾಗಿಸಿಕ್ಕೊಳ್ಳುವ, ಕರುಣಾಮಯಿ, ಚಾಮುಂಡಿ.ಎಂತಲೇ, ನಾಡಿನ ಎಲ್ಲೆಡೆಗಲಿಂದಲೂ, ಇಲ್ಲಿ ಬಂದು ನೆಲೆಸಿ, ನೆಮ್ಮದಿಯಾಗಿ ಜೀವನ ನಡೆಸುವ ಭಾರತದ ಪೌರರು ಎಷ್ಟೇ ಕಠಿಣ
ಪರಿಸ್ಥಿತಿಯಲ್ಲಿದ್ದರೂ, ಸವಾಲುಗಳಿದ್ದರೂ, ತಾಯಿಯ ಮಡಿಲಲ್ಲಿದ್ದು, ಕರುಳಿನ ಕರೆಗೆ ಸ್ಪಂದಿಸುವ ತಾಯಿಯ ಅನುರಾಗ ಅರಳಿತು ಎಂಬ ಧೈರ್ಯದಿಂದ, ಬಾಳನ್ನು ನಡೆಸುತ್ತಿದ್ದನೆ, ಕನ್ನದ ಕಂದ. ’ತಾಯಿ ಚಾಮುಂಡಿ  ನೀನೇ ಗತಿಎಂದು ಶರಣಾದಾಗ ಎಲ್ಲಾ ಆಪತ್ತುಗಳಿಂದ ಖಚಿತ ಮುಕ್ತಿ.’

.
೧೧..ಶ್ರೀ ಅರುಣಾಚಲೇಶ್ವರ ಮತ್ತು ಜಗನ್ಮಾತೆ
----------------------------------------------

ತಿರುವಣ್ಣಾಮಲೈಯನ್ನು ಅರಿಯವದರಿಲ್ಲ. ಪ್ರಸಿದ್ಧ ತತ್ವ ಜ್ಞಾನಿ ಶ್ರೀ ರಮಣ ಮಹರ್ಶಿಗಳು ಇಲ್ಲಿ ನೆಲೆಸಿ, ತಪಗೈದು ಶ್ರೀರಮಣಾಶ್ರಮ
ವನ್ನು ಸ್ಥಾಪಿಸಿಆತ್ಮಜ್ಞಾನ ಮೂಡಿಸಿದ ಪ್ರಸಿದ್ಧ ಸ್ಥಳ.
ಶ್ರೀ ರಮಣ ಮಹರ್ಷಿಗಳ ಮೂಲ ಹೆಸರು ಶ್ರೀ ವೆಂಕಟರಾಮನ್. ಬಾಲ್ಯದಿಂದಲೂ, ಪರತತ್ವ ಮತ್ತು ಅಧ್ಯಾತ್ಮ ತತ್ವಕ್ಕೆ ಒಲವು. ಅಂತಲೇ,ಒಮ್ಮೆ, ಅವರ ಸಮೀಪದ ಬಂಧುಗಳು ಮರಣ ಹೊಂದಿದಾಗ ಅವರು ಸಾವಿನನಂತರದ ಅನುಭವವನ್ನು ಪಡೆಯಲು ಕೆಲವು ಘಂಟೆಗಳ ಕಾಲ ಅಂತೆಯೇ ನಟಿಸಿದರು.
ನಂತರ ಕಾಲ್ನಡಿಗೆಯಲ್ಲೇ ತಿರುವಣ್ಣಾಮಲೈ ತಲುಪಿ ಅತ್ಯುತ್ತಮವಾದ ತಪವನ್ನು ಕೈಗೊಂಡು ಆತ್ಮಸಾಕ್ಷಾತ್ಕಾರವನ್ನು ಪಡೆದರು. ಅವರ
ಉಪದೇಶಸಾರದ ಪಾಠ;-’ ನಾನು ಎಂಬುದು ಶರೀರವಲ್ಲ. ಆತ್ಮ. ಅದು, ಶರೀರ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವುಗಳನ್ನು ಮೀರಿದ ಅವಸ್ತೆ. ’ ಜಗತ್ತಿನ ನಿಯಾಮಕ   ಭಗವಂತನೇ ಎಲ್ಲೆಲ್ಲಿಯೂ, ಎಲ್ಲರಲ್ಲಿಯೂ ಇದ್ದು ಬಾಳನ್ನುನಡೆಸುತ್ತಾನೆ. ಇದಕ್ಕೆ ಉದಾಹರಣೆ;
ಕನ್ನಡಿಯಲ್ಲಿ ಚಿಕ್ಕ ನಾಮನ್ನೀಡಬೇಕಾದರೆ, ಅದರಲ್ಲಿ ಕೈ ಹೋಗುವುದಿಲ್ಲ. ಅದು ಪ್ರತಿಬಿಂಬಕ್ಕೆ ಹೋಗುತ್ತದೆ. ಅದಕ್ಕೆ ಉತ್ತಮ ಮಾರ್ಗ
ನಾವೇ ನಾಮವನ್ನು ಇಟ್ಟುಕೊಳ್ಳುವುದು.  ಹಾಗೆಯೇ ನಾನು ಎಂಬ ವಸ್ತು ವಿಶ್ವವ್ಯಪಿಯಾದರೆ ಬದುಕು ಸಾರ್ಥಕವಾಗುವುದು.
ಅಂತೆಯೇ, ಒಮ್ಮೆ, ಭಕ್ತನನ್ನು ಕೆಳುತ್ತಾರೆ. ’ನೀನು ಒಂದು ದಿನ ಸ್ಮಶಾನದಲ್ಲಿರು. ಮತ್ತೆ ಯಾರಾದರೂ ಇದ್ದರೆ ಹೇಳುಎಂದು ಕೇಳಿದಾಗ ಬೆಳಿಗ್ಗೆ
ಯಾರೂ ಇರಲಿಲ್ಲವೆಂದನು. ’ನೀನು ಇರಲಿಲ್ಲವೇಎಂದಾಗ, ಅವನಿಗೆ ಇರುವಿಕೆಯ ಅರಿವಯಿತು. ಇದೇ, ’ಆತ್ಮ ಜ್ಞಾನ.’
ಇಲ್ಲಿರುವ ಗಿರಿಯನ್ನು ಸುತ್ತಿ ಬಂದರೆ, ಅದೇಗಿರಿವಲಂ’. ವರ್ಷಕ್ಕೊಮ್ಮೆ ನಡೆಯುವಕಾರ್ತಿಕ ದೀಪಂಉತ್ಸವ ಜಗತ್ ಪ್ರಸಿದ್ಧ. ಗಿರಿಯ
ಜ್ಯೊತಿ ಎಲ್ಲೆಲ್ಲೂ ಬೆಳಗುತ್ತದೆ.
ಪಂಚಭುತಗಳಲ್ಲಿ ಅಗ್ನಿಯ ಅಂಶ ಇಲ್ಲಿದೆ. ’ಅಗ್ನಿಯು ನಾವು ನಡೆಸುವ ಹೋಮಗಳ ಹವಿಸ್ಸನ್ನು ದೇವತೆಗಳಿಗೆ ಅರ್ಪಿಸಿ, ಅವರಿಂದ ನಲ್ಮೆ
ಪಡೆಯುವಂತೆ, ಸಮಸ್ತ ಅಪರಾಧಗಳನ್ನೂ ದಹಿಸುತ್ತದೆ. ಅಂತಯೆ, ನಮ್ಮಲ್ಲಿರುವ ದುಷ್ಟ ಬಯಕೆಗಳನ್ನು ನಿರ್ನಾಮಗೊಳಿಸಿ, ಜ್ಞಾನವನ್ನಿತ್ತು
ಪಾರಮಾರ್ಥದತ್ತ ಕೊಂಡೊಯ್ಯುವ   ಮಾತೆ ಇಲ್ಲಿದ್ದಾಳೆ.[ ಅಪಿತ ಕುಚಾಂಬಾಳ್].
ಶ್ರೀ ರಾಮಾಯಣದಲ್ಲಿ ಮಾತೆ ಸೀತೆಯು ಅಗ್ನಿಪರೀಕ್ಷೆಯಲ್ಲಿ ಶುದ್ಧವಾಗಿ ಜಯಿಸಿ ಬರುವಳಲ್ಲವೇ.ನಂತರ ಪದ್ಮಾವತಿಯಾಗಿ ಶ್ರೀ ಶ್ರೀನಿವಾಸ-
ನನ್ನು ವರಿಸಲಿಲ್ಲವೇ. ಶಿವನ ಹಣೆಗಣ್ಣಿನ ತೇಜಸ್ಸು ಮುರುಗನಾಗಿ ಬಂದು ಕೂಡಿಸಲಿಲ್ಲವೇ. ಶ್ರೀ ಅಪಿತ ಕುಚಾಂಬಾಳ್,ಮಾತೆಯ ನಾಮಧೇಯ.
ರಮಣೀಯ ಕ್ಷೇತ್ರ. ಶ್ರೀ ರಮಣರ ತಾಣ. ರಮ್ಯವಾದ ವಾತಾವರಣ. ಶ್ರೀ ಅರುಣಾಚಲೇಶ್ವರನ ಅಡಿದಾವರೆಯಲ್ಲಿ ಐಕ್ಯವಾಗಲು ಅಪೂರ್ವ
ಅವಕಾಶ.
===========================================================================================================================
.೧೩.ಶ್ರೀ ಕಾಳಹಸ್ತೀಶ್ವರ.ಮತ್ತು ಪಾರ್ವತಿ ದೇವಿ
================================================
ಹರಿಹರರು ಬೇರಲ್ಲ ಎಂಬ ನಾಣ್ಣುಡಿಯನ್ನು ಸತ್ಯವಾಗಿಸಲು ಶ್ರೀ ಶಂಕರನಾರಾಯಣರು ಒಂದಾಗಿದ್ದಾರೆ. ತಿರುಪತಿಯಲ್ಲಿ ಶ್ರೀ ಶ್ರೀನಿವಸ
ಬಳಿಯ ಕಾಳಹಸ್ತಿಯಲ್ಲಿ ಶ್ರೀ ಕಾಳಹಸ್ತೀಶ್ವರ ಇಬ್ಬರೂ ಬಳಿಯಲ್ಲಿದ್ದಾರೆ.
ಶ್ರೀ ಶ್ರೀನಿವಸನು ಗಿರಿಯ ಮೇಲೆ ಭಕ್ತರನ್ನು ಅನುಗ್ರಹಿಸಿದರೆ,ಶ್ರೀ ಪರಮೇಶ್ವರನು ಪಾರ್ವತಿಯೊಂದಿಗೆ ಅನುಗ್ರಹಿಸುತ್ತಿದ್ದಾನೆ.
ರಾಹುದೋಷದಿಂದ ಮದುವೆಯಾಗದ ಕನ್ಯಾಮಣಿಗಳು ಇಲ್ಲಿ ಬಂದು ಪರಿಹಾರ ನರವೇರಿಸಿದರೆ ಅವರ ವಿವಾಹ ನಿಶ್ಚಯ.
ಪಂಚಭೂತಗಳಲ್ಲಿ ಒಂದಾದ ವಾಯು ರೂಪದಲ್ಲಿ ಶ್ರೀ ಪರಮೇಶ್ವರ ಇದ್ದಾನೆ. ಮನುಷ್ಯನಿಗೆ ಎಷ್ಟೇ ಅವಯವಗಳಿದ್ದರೂ ಪ್ರಾಣವಿಲ್ಲದಿದ್ದರೆ
ಅವನು ಜಡ. ಅದು ಯಾವಾಗ ಹೊರಹೋಗುವುದೇಂಬುದು ತಿಳಿಯದ ವಿಷಯ.ಆದರೆ ನಿಶ್ಚಯ.ಶ್ರೀ ಶಿವನ ಅಡಿದಾವರೆಗೆ ಎರಗಿದರೆ, ಸಾವಿನ ಭಯದಿಂದ ಬಿಡುಗಡೆ. ಬೇಡನಾಗಿದ್ದ ಕಣ್ಣಪ್ಪನು ಮಾಂಸವನ್ನೇ ನೈವೇದ್ಯ ಮಾಡಿ, ಶಿವನ ಕಣ್ಣಲ್ಲಿ ರಕ್ತ ಬಂದಾಗ,ತನ್ನ ಕಣ್ಣನ್ನೇ ದಾನವಾಗಿತ್ತ. ’ಬೇಡರ ಕಣ್ಣಪ್ಪಎಂದು ಖ್ಯಾತನಾದ.
ಮ್ರುಕಂಡುವಿನ ಸುತ ಮಾರ್ಕಂಡೇಯನು ಅಲ್ಪಾಯುಷಿಯಾದರೂ, ಶಿವನನ್ನು ಧೃಢವಾಗಿ ಆರಾಧಿಸಿ, ಯಮನ ಮುಷ್ಟಿಯಿಂದ ತಪ್ಪಿ ದೀರ್ಘಾಯುವಾದ.
ಒಳ್ಳೆಯ ವಂಶದಲ್ಲಿ ಜನಿಸಿದ್ದರೂ, ದುಷ್ಚಟಗಳಿಗೆ ಬಲಿಯಾದ ಮಹಿಳೆಯೊಬ್ಬಳು, ಕುರುಡಿಯಾಗಿ ಅನ್ನವಿಲ್ಲದೇ, ಬೆಂದು, ಬವಳಿಯಾಗಿ,
ಯಾತ್ರಿಕನಿತ್ತ ಬಿಲ್ವಪತ್ರೆಯನ್ನು ಶಿವನ ಮೇಲೆ ಹಾಕಿ, ಶಿವರಾತ್ರಿಯಂದು ಉಪವಾಸವಿದ್ದು, ಮರಣಹೊಂದಿದ್ದರಿಂದ ಶಿವಲೋಕ ಪ್ರಾಪ್ತಿಯಾಯಿತು.[ಗುರುಚರಿತ್ರೆ].
ಶ್ರೀ ಶೈಲದಲ್ಲಿ ಪಾರ್ವತಿ ಮಾತೆಯು ಹರಸಲು ಭವ್ಯವಾಗಿ ನಿಂತಿದ್ದಾಳೆ. ಅಪೂರ್ವ ತೇಜಸ್ಸು, ಹುಸಿನಗೆ, ಅಭಯ ಮುದ್ರೆ, ಅಪೂರ್ವ ಗಾಂಭಿರ್ಯ, ನೋಡುತ್ತಿರಲೇಬೇಕೆನ್ನುವ ಆಕರ್ಷಣೆ.  ಮುದದಿಂದ ಐಕ್ಯವಾಗುವ ಮನಸ್ಸು, ಭಕ್ತರನ್ನು, ಭಕ್ತಿಪಾಶದಿಂದ ಕಟ್ಟಿಹಾಕಿ, ಭುವಿಯನ್ನು ಮರೆಸಿ,ಭವ್ಯ ಮೋಕ್ಷದತ್ತ ಕರೆದೊಯ್ಯುವ ಅಭಯ, ಹಿಂತಿರುಗಲು ಒಪ್ಪದ ಮನ.
ತಾಯನ್ನು ನೋಡುತ್ತಾ, ತನ್ನತ್ತ ತುಂಭಿಕೊಳ್ಳುವ ತನ್ಮಯತೆ,  ಪಾಪ ಮಾಡಿದವರನ್ನು, ’ಅಯ್ಯೋ ಪಾಪಎಂದು ಕನಿಕರಿಸಿ, ಅನುಗ್ರಹಿಸುವ, ಅನುಪಮ ಕಾರುಣ್ಯಮಾತೆ.’ಕಾಲನ ಪಾಶವನ್ನು ಕಡೆಗಣಿಸಿ, ತನ್ನತ್ತ ಕರೆದೊಯ್ಯುವ ಕೈಲಾಸನಾಥನ ಮನದನ್ನೆಯಲ್ಲವೇ.
ದ್ರೌಪದಿಯ ಕರೆಗೆ ಧಾವಿಸಿ ಬಂದ ದಾಮೋದರನಂತೆ, ತನ್ನ ಭಕ್ತರನ್ನು ಒಡನೇ ಕಾಯಲು ನಿಂತು, ಕರೆ ಕೇಳಿದೊಡನೆ, ಧಾವಿಸಿ ಬರುವ ದಯಾಮೂರ್ತಿಯಲ್ಲವೇ, ಮಾತೆ.
==================================================================================

=೧೩.   ತಿರುವೇರ್ಕಾಡು ಕರುಮಾರಿ ಅಮ್ಮನ್
-----------------------------------
ತಿರು ಎಂದರೆ ಲಕ್ಷ್ಮಿ. ವೇರ್ =ಬುಡ ಕಾಡು =ವನ. ಸಂಪತ್ಪ್ರದಾತೆ ಶ್ರೀ ಲಕ್ಶ್ಮಿ. ಅದರಲ್ಲಿ ಅತ್ಯುತ್ತಮ ಹಿರಿಯದಾದ ಸಂಪತ್ತು
ಆತ್ಮಜ್ಞಾನ. ಅದರ ಉದ್ದೇಶ ಮೋಕ್ಷ ಭಗವಂತನ ಸಾನ್ನಿದ್ಯ.
ವೇರ್ ಎಂದರೆ ಬುಡ. ಎಂದರೆ ಯಾವುದು ಮೂಲ. ಒಳ್ಳೆಯ ಬೀಜವನ್ನು ಆಯ್ದು, ನೆಟ್ಟು, ಉತ್ತಮ ಗೊಬ್ಬರವನ್ನು ಹಾಕಿ, ಜಲಪ್ರಯೋಗ ಮಾಡಬೇಕು. ಮಳೆಯ ಕೃಪೆಯೂ ಬೇಕು. ಗಿಡ ಹೆಮ್ಮರವಾಗಿ, ಪುಷ್ಪ, ನಂತರ ಫಲಗಳನ್ನು ಕೊಡುವುದು. ಅದನ್ನು ಸಂಗ್ರಹಿಸಿ, ಆಸ್ವಾದಿಸಿ, ಪಡೆಯುವುದೇ, ಅಪರಿಮಿತ
ಅಭಯವೇ
ಅನಂದವಾಗುತ್ತದೆ. ಮಾನವನು ಪಲಾಪೇಕ್ಷೆಪಡುವುದರೊಂದಿಗೆ, ’ಹೃದಯವೆಂಬ ತೋಟದಲ್ಲಿ, ಭಕ್ತಿಯ ಬೀಜವನ್ನು ಬಿತ್ತಿ, ಸಾಧನೆಯೆಂಬ
ಗೊಬ್ಬರವನ್ನು ಹಾಕಿ, ನಂತರ ನವವಿಧಭಕ್ತಿಯನ್ನು ಸಿಂಪಡಿಸಿದರೆ, ಬರುವ ಹೆಮ್ಮರವೇ ಭಗವಂತನ  ’ಸಾಕ್ಷಾತ್ಕಾರ.’ ಅವನ ಅಭಯವೇ ನೆರಳು. ನೆರಳಿನಲ್ಲಿ ತಂಪಾಗಿ ತಂಗಿ, ನಂತರ ಅವನ ಕರುಣೆಯೆಂಬ ಫಲವನ್ನು ಪಡೆದು, ಎಲ್ಲರೋಡನೆ ಹಂಚಿಕೊಂಡಾಗ,
ಆಗುವ ಆನಂದ ಅಪರಿಮಿತ. ’ತಾಯಿ ತಪ್ಪು ಮಾಡಿದ ಮಗನನ್ನು ಮೊದಲು ಗದರಿಸುವಳು, ನಂತರ ಮೃದು ಏಟು. ಇಲ್ಲ, ಕೋಣೆಯಲ್ಲಿ ಕೂಡಿ-ಹಾಕುವುದು. ಅಂತಿಮವಾಗಿ, ಉತ್ಕಟತೆಯನ್ನು ಮುಟ್ಟಿದಾಗ, ಪರಮಾತ್ಮ ತನ್ನ ಬಳಿ ಸೆಳೆದುಕೊಳ್ಳುವನು. ಶಕ್ತಿಯ ಪ್ರತಿರೂಪವೇದೇವಿ ಕರುಮಾರಿಯಮ್ಮನ್.’ ;ಮುಂಚೆ ಅಷ್ಟಾಗಿ ಪ್ರಸಿದ್ಧಿ ಪಡೆಯದ ಪ್ರದೇಶ, ಇಂದು ತಮಿಳುನಾಡಿನಲ್ಲಿ ಮನೆಮಾತಾಗಿದೆ. ಚೆನ್ನೈಯಿಂದ, ಸುಮಾರು ೪೦ ನಿಮಿಷಗಳ ಪಯಣ. ವಿಶಾಲವಾದ ದೇಗುಲ. ವಿನಾಯಕನ ಸ್ವಾಗತ. ಭಕ್ತವೃಂದ ಅಪಾರ.
ಶುಕ್ರವಾರ ಮತ್ತು ಮಂಗಳವಾರ ಅತಿ ಹೆಚ್ಚು ಜನಸಾಗರ.
ಮಾತೆ ಸ್ವಯಂಭುವಾಗಿದ್ದಾಳೆ. ಇದರ ಜೊತೆ, ಜಲ, ಕ್ಷೀರ, ಎಳನೀರು, ಇವುಗಲಿಂದ ಅಭಿಷೇಕ ಗೊಂಡು, ಮಂಗಳ ದ್ರವ್ಯ, ಹರಿದ್ರಾಕುಂಕುಮಗಳಿಂದ ಅಲಂಕೃತಳಾಗಿ, ಅರ್ಚಿಸಲ್ಪಟ್ಟು, ಭಕ್ತರಿಗೆ,ಶಾಂತಿಯನ್ನೂ, ಅಯು, ಆರೋಗ್ಯ, ಸಂಪದ, ಸಮಸ್ತವನ್ನೂ ನೀಡುತ್ತಾಳೆ.
ಮಾರಿಯಮ್ಮ ಎಂದರೆ, ಸಾಮಾನ್ಯವಗಿ,’ ನಗರ ಕಾಯುವ ದೇವತೆ..’ಈಕೆ ವಿಶ್ವವನ್ನೇ ಕಾಯುವ ದೇವತೆ.’ಅಸುರರು ಯಾವ ಸಮಯದಲ್ಲಾದರೂ ಆಕ್ರಮಿಸಬಹುದು. ಅಂತೆಯೇ, ಅಸುರರನ್ನು ಅಳಿಸಲು ತಾಯಿ ಸದಾ ಸಿದ್ಧ. ಆರಿಷಡ್ವರ್ಗ, ಅಹಂಕಾರ, ಆಸೆ, ದ್ವೇಷ, ಈರ್ಷೆ, ಅಸುರರನ್ನು ಹತ್ಯೆ ಗೈಯ್ಯದೆ, ನಮಗೆ ನಲ್ಮೆ ದೊರಕದು.ಜೊತೆಗೆ, ಸರ್ಪರಾಜನು ಕಾವಲಿದ್ದಾನೆ. ಅವನ ಬುಸುಗುಟ್ಟುವಿಕೆಗೇ ಅಸುರರು ಹೆದರಿ ಓಡಿ ಹೋಗುತ್ತಾರೆ. ಅಂತೆಯೇ, ತಾಯಿ ತನ್ನ ಮಕ್ಕಳನ್ನು ರಕ್ಷಿಸಲು, ಸಿಂಹವಾಹಿನಿಯಾಗಿ, ಶೂಲಧರಿಣಿಯಾಗಿ, ಸಿದ್ಧವಾಗಿದ್ದು, ಎರಗುವ, ದುಷ್ಟ ಶಕ್ತಿಗಳನ್ನು ಸಂಹರಿಸಿ, ವಾತಾವರಣವನ್ನು,ತಿಳಿಗೊಳಿಸಿ, ಸಜ್ಜನರ ಭಯವನ್ನು ಹರಿಸಿ, ತನ್ನ ಅಭಯ ಹಸ್ತವನ್ನು ಭಕ್ತರ ಶಿರದ ಮೇಲಿರಿಸಿ, ಜ್ಞಾನವನ್ನು ಕರುಣಿಸಿ, ತನ್ನ ಬಳಿಕರೆಸಿ, ಅಪೂರ್ವ ವರವಾದಮೋಕ್ಷವರವನ್ನು ಕರುಣಿಸುತ್ತಾಳೆ.
=========================================================================================================================
-೧೪.ಮಾಂಗಾಡು ಕಾಮಾಕ್ಷಿ
===============================================
ತಿರುವೇರ್ಕಾಡಿನಂತೆಯೇ ಇದು ಪವಿತ್ರ ಕ್ಷೆತ್ರ. ಏಕೆಂದರೆ, ಮಾಂಗಾಡು ಎಂದರೆ, ಮಾವಿನ ತೋಪು. ಒಂದು ಕಾಲದಲ್ಲಿ ಮಾವಿನ ಮರವೇ ದಟ್ಟ ಕಾಡಾಗಿತ್ತು.
ಮಾವಿನ ವಿಶೇಷವೇನು. ಹಳೆಯ ಓಟೆಯನ್ನೇ ಬಿತ್ತರೆ ಹೆಮ್ಮರವಾಗುತ್ತದೆ. ಮಾವಿನ ಎಲೆ, ಮನೆಯಲ್ಲಿ, ಶುಭ ಕಾರ್ಯಗಳಿಗೆ ಮನೆಯಲ್ಲಿ ಉಪಯೊಗವಾಗುತ್ತದೆ.ಶುಭ ಕಾರ್ಯಗಳಲ್ಲಿ, ಎಲೆಗಳನ್ನು, ದಾರ ಕಟ್ಟಿ, ಕಡ್ಡಿಗಳಿಂದ ಪೋಣಿಸಿ ಕಟ್ಟುವುದು ಒಬ್ಬರಿಂದ ಸಾಧ್ಯವಿಲ್ಲ. ಆದ್ದರಿಂದ ಎಲ್ಲರ ಸಹಕಾರ ಎಂಬ ದಾರಕ್ಕೆ ಒಂದೊಂದು ಎಲೆಯನ್ನೂಬೆಂಬಲಎಂಬ ಕಡ್ಡಿಯಿಂದ ಒಂದು ಗೂಡಿಸಿದರೆ, ತೋರಣವಾಗುವದು.ಮಾವಿನ ಕಾಯಿ ಅನ್ನ, ಗೊಜ್ಜು, ಉಪ್ಪಿನಕಾಯಿ, ಬಲು ರುಚಿ. ಹುಳಿಯೇ ಅದರ ಕೇಂದ್ರ ಬಿಂದು.  ಅಂತೆಯೇ, ಪೂರ್ವಜನ್ಮದ ಸತ್ಕಾರ್ಯವೆಂಬ ಓಟೆಯನ್ನು
ನೆಟ್ಟು, ಪ್ರಯತ್ನವೆಂಬ ಜಲ ಎರೆದು ಬಂದ ಮವಿನ ಹಣ್ಣನ್ನು, ಆಸೆ,ಬಯಕೆ ಎಂಬ ಸಿಪ್ಪೆಯನ್ನು ತೆಗೆದು, ಜ್ಞಾನವೆಂಬ ಕತ್ತಿಯಿಂದ ಕತ್ತರಿಸಿ ಹೋಳಾಗಿಸಬಹುದು. ಬರಿ ಓಟೆಯೂ ಇರುತ್ತದೆ. ನಾಮಸ್ಮರಣೆ, ಪೂಜೆ, ಇವುಗಳು ಹೋಳಾದರೆ, ತಪಸ್ಸು, ಜಪ, ಎಲ್ಲರಿಗೂ ಸಾಧ್ಯವಿಲ್ಲ. ಹಿಂದೆ ಋಷಿ ಮುನಿಗಳು ತಪಗೈಯ್ಯುತ್ತಿದ್ದರು. ಅದರಿಂದ ಗಳಿಸಿದ ಫಲವನ್ನು ಲೋಕಕ್ಷೇಮಕ್ಕೆ ಬಳಸುತ್ತಿದ್ದರು.ಕೆಲವು ಅಸುರರು ತಪ ಮಾಡಿದಾಗ, ಫಲವನ್ನು ಲೋಕಕಂಟಕಕ್ಕೆ ಬಳಸುತ್ತಿದ್ದರು. ಅವರ ಅಟಾಟೋಪವನ್ನು ತಡೆಯಲು ಶಕ್ತಿಯ ಉದ್ಭವ.
ಅದರಲ್ಲಿ ಶೂರಪದ್ಮನ  ನಿಗ್ರಹಕ್ಕೆ ಶ್ರೀ ಸುಬ್ರಮಣ್ಯನ ಅವತಾರವಾಗಬೇಕಾಯಿತು. ಅದಕ್ಕೇ ಶ್ರೀ  ಪಾರ್ವತಿ-ಪರಮೇಶ್ವರ ವಿವಾಹದ ಅವಶ್ಯವಾಯಿತು. ಅಸುರರ ಹಿಂಸೆಯೇ, ಅವರ ಅಳಿವಿನ ಕೋಪವಾಗಿ ಸನತ್ಕುಮಾರರು ಮುರುಗನಾಗಿ ಜನಿಸಲು ಕಾರಣವಾಯಿತು.
ತಾಯಿ ಉಮೆ ಹಿಮವಾನನ ಮಗಳಾಗಿ ಜನಿಸಿ, ಶಿವನನ್ನೇ ಪತಿಯಾಗಿ ಪಡೆಯುವ ಉದ್ದೆಶದಿಂದ ಪಂಚಾಗ್ನಿಯಲ್ಲಿ ಘೋರ ತಪಸ್ಸನ್ನು ಗೈಯ್ಯುತ್ತಾಳೆ.
ಪರೀಕ್ಷಿಸಲು ವೃದ್ಧನ ವೇಶದಲ್ಲಿ ಬಂದ ಪರಶಿವನನ್ನು ಮೃದುವಾಗಿ ಛೇಡಿಸಿ, ತನ್ನ ಅವಿಛಿನ್ನ ಪ್ರೇಮದಿಂದ ಶಿವನನ್ನು ವರಿಸುತ್ತಾಳೆ.
ಕಾಮದಹನವಾಗಿ, ಶಣ್ಮುಖನು ಜನಿಸಿ, ಆರುಮುಗನಾಗಿ, ವಳ್ಳೀಪತಿಯಾಗಿ, ದೇವಸೇನಾಪತಿಯಾಗಿ, ಶ್ರೀ ಸುಬ್ರಮಣ್ಯನಾಗಿ ಹರಸುವ ಕತೆ ಸರ್ವವೇದ್ಯ.
ಸೂಜಿ ಯಾವಾಗಲು ನೆಟ್ಟ ದೃಷ್ಟಿಯುಳ್ಳದ್ದು. ತುದಿಯಲ್ಲಿ ಮೊನಚು. ದಾರವನ್ನು ಪೋಣಿಸುವಾಗ ರಂದ್ರದಲ್ಲಿ ನಾಜೂಕಾಗಿ ಸೇರಿಸಬೇಕು. ನಂತರ ಕಾರ್ಯ 
ಸುಲಭ. ಒಂದೊಂದು ಹೂವೂ ಕಟ್ಟಿದನಂತರ ಹಾರವಾಗಿ ಭಗವಂತನನ್ನು ಸೇರುವುದು.
ಹಾಗೆಯೇ, ಜೀವಾತ್ಮ ಪರಮಾತ್ಮನನ್ನು ಸೇರಲು, ಏಕಾಗ್ರತೆಯೆಂಬ ಸೂಜಿ ಅವಶ್ಯ. ಅದರಲ್ಲಿ ಅನುಸಂಧಾನವೆಂಬ ಹಾರವನ್ನು ಮನಸ್ಸೆಂಬ ಸಣ್ಣ ರಂಧ್ರದಲ್ಲಿ ಪೋಣಿಸಿ, ಸಾಧನೆ, ನಾಮಸ್ಮರಣೆ, ಸೇವೆಯೆಂಬ ವಿವಿಧ ಹೂವುಗಳನ್ನು ಪೋಣಿಸಿದಾಗ ಅರ್ಪಣೆಯೆಂಬ ಮಾಲೆಯಾಗುತ್ತದೆ. ಅದಕ್ಕೆ,ಭಕ್ತಿಯೆಂಬ ಸುವಾಸನೆಯನ್ನು ಸೇರಿಸಿ, ಭಗವಂತನಿಗೆ ಅರ್ಪಿಸಿದಾಗ, ಅವನ ಕೊರಳಿನಲ್ಲಿಐಕ್ಯಎಂಬ ಮಾಲೆಯಾಗಿ ಶೋಭಿಸುತ್ತದೆ. ಅನಂತರ
ಅವನಿಂದ ದೊರಕುವ ವರ ಅವನಂಘ್ರಿಯಲ್ಲಿ ಐಕ್ಯ, ಮಿಲನ. ಇದೇ, ಮಾಂಗಾಡು ಮಹಾತಾಯಿಯ ಕ್ಷೇತ್ರದ ಮಹತ್ವ.
-೧೫. ಅನ್ನೈ ಅಭಿರಾಮಿ
-------------------- 
ಪಂಚಭೂತಗಳನ್ನು ಸ್ರುಷ್ಟಿಸಿದ್ದಾನೆ.ಆಕಾಶ ಮಳೆಯನ್ನು
ಕೊಟ್ಟರೆ, ಅಗ್ನಿ, ಶಾಖವನ್ನು ಕೊಟ್ಟು, . ಜಲ ಶರೀರ ಮತ್ತು ಮನಶುದ್ಧಿಗೆ ಕಾರಣವಾಗಿ ಬಾಯಾರಿಕೆಯನ್ನು ತಣಿಸಿದರೆ, ಶರೀರ, ಅವಯವ ಗಳಿದ್ದು, ಪ್ರಾಣವಿಲ್ಲದಿದ್ದರೆ, ಅದುಜಡಎನಿಸುವುದು. ಇದಕ್ಕೆ ಜೊತೆಯಾಗಿ, ಮನ, ಚಿತ್ತ,ಭುದ್ಧಿ, ಅಹಂಕಾರ, ಇವು ಸಹಚರಿಗಳು.ಜಗತ್ತಿನ ಪ್ರತ್ಯಕ್ಷ ದೈವ ಸೂರ್ಯ. ಮಾನವನನ್ನು ಎಚ್ಚರಿಸಿ, ಕ್ರಿಯಾಶೀಲನನ್ನಾಗಿ ಮಾಡುವುದರ ಜೊತೆಗೆ, ಸಸ್ಯಗಳ ಬೆಳವಣಿಗೆಗೆ,
ಬೆಳಕು ಅವಶ್ಯ. ಹಗಲು ಚಟುವಟಿಕೆಯ ಕಾಲವಾದರೆ, ರಾತ್ರಿ, ಚಂದ್ರನು ತನ್ನ ತಂಪಿನ ಕಿರಣಗಳಿಂದ ಆಕರ್ಷಿಸುವನು. ಇದರ ಜೊತೆಗೆ ತಾರಾ ಸಮೂಹ ನಕ್ಷತ್ರ ಮಾಲೆ, ಗಗನಕ್ಕೆ ಹಾಕಿದಂತೆ ಇರುವುದು.ಕಾಲದ ಆರೋಹಣ-ಅವರೋಹಣ ಎಂದರೆ, ಸೂರ್ಯನು ವೃದ್ಧಿಸುವ ಕಾಲಕ್ಕೆ ಉತ್ತರಾಯಣವೆಂದೂ, ಶುಭಕರವೆಂದೂ, ದಕ್ಷಿಣಾಯಣವೆಂದರೆ ಇಳಿತದ ಸರದಿ ಎಂದು ಪ್ರತೀತಿ. ಮರಣಕ್ಕೂ ಉತ್ತರಾಯಣವೇ ಸ್ವಾಗತಾರ್ಹ. ಪಿತಾಮಹ ಭೀಷ್ಮರು ಇಚ್ಚಾ ಮರಣಿಯಾದರೂ, ತಮ್ಮ ಕೊನೆಗೆ ಉತ್ತರಾಯಣವನ್ನೇ ಆಯ್ಕೆ ಮಾಡಿದರು.ಅಂತೆಯೇ, ಚಂದ್ರನು ವೃದ್ಧಿಯಾಗುವುದು, ಅಮಾವಾಸ್ಯೆಯಿಂದ ಪೌರ್ಣಮಿಯವರೆಗೆ. ನಂತರ ಇಳಿತ ಪೌರ್ಣಮಿಯಿಂದ ಅಮಾವಾಸ್ಯೆಯವರೆಗೆ.
ಪಿತೃಕಾರ್ಯಕ್ಕೆ ಅಮಾವಾಸ್ಯೆ ಪ್ರಶಸ್ತವಾದರೆ ಶ್ರೀ ಸತ್ಯನಾರಾಯಣ ಪುಜೆಗೆ ಪೌರ್ಣಮಿ ಪ್ರಶಸ್ತ.ಪ್ರಕೃತಿ ಮಾತೆ ಅಭಿರಾಮಿಯು ತಿರುಕಡೈಯೂರಿನಲ್ಲಿನೆಲೆಸಿದ್ದಾಳೆ. ಮುಗ್ಧ ಮೋಹನ ರೂಪ ಆಕರ್ಷಕ. ಅನುಕಂಪ, ದಯೆಯ ಪ್ರತಿರೂಪ.
ಶ್ರೀ ಕಾಂಚಿ ಪರಮಾಚಾರ್ಯರು ಮೊದಮೊದಲು, ತಾಯಿಗೆ ತಾಟಂಕವನ್ನು ಅರ್ಪಿಸಿದರು. ’ ತಾಟಂಕ ಯುಗಳೀ ಭೂತ ಕರ್ಣಪೂರ್ಣ ಮನೋಹರಾಎಂಬುದು ಶ್ರೀ ಲಲಿತಾ ಸಹಸ್ರನಾಮದ ಒಂದು ಸಾಲು. ತಾಟಂಕವು ತಾಯಿಯ ಕರ್ಣಗಳಿಗೆ, ಅಪೂರ್ವ ಶೋಭೆಯನ್ನು ನೀಡುತ್ತದೆ ಕಿವಿಯಲ್ಲಿಭಕ್ತರ ಮೊರೆ ಕೇಳಿ ಕಾಯುತ್ತೇನೆಎಂದು ಆಶಿರ್ವದಿಸಿದಾಗ, ತಾಟಂಕವೂ ಆಡಿದರೆ ಅದೇನು ಅಂದ
ಶ್ರೀ ಅಭಿರಾಮಭಟ್ಟರು ಮಹಾನ್ ದೇವೀ ಭಕ್ತರು.ಸತ್ಯವಾಕ್ಯ ಪ್ರಿಯರು. ಅಮಾವಾಸ್ಯೆಯ ದಿನ ಪೌರ್ಣಮಿಯೆಂದರು.’ಒಪ್ಪದ ರಾಜ,ಕೆಳಗೆ ಬೆಂಕಿ ಹೊತ್ತಿಸಿ, ಅವರನ್ನು ಒಂದು ಪಂಜರದಲ್ಲಿ ನಿಲ್ಲಿಸಿ, ಹಿಂಸಿಸಿದ. ತಾಯಿಗೆ ಶರಣಾದರು ಭಟ್ಟರು. ತಾಯಿ ಬಿಡುವಳೇ.ಅವರ ನುಡಿಯನ್ನುನಿಜಗೊಳಿಸಲು, ತನ್ನ ತಾಟಂಕವನ್ನು ಎಸೆಯಲು, ಬೆಳಕಿನ ಪ್ರಖರದಲ್ಲಿ ಜಗತ್ತೇ ಮತ್ತೊಂದು ಚಂದ್ರನಂತೆ ಪ್ರಕಾಶಿಸಿತ್ತು.ಘಾಭರಿಗೊಂಡ ಅರಸ ಭಟ್ಟರ ಕ್ಷಮೆ ಕೇಳಿದ.
ಸೂರ್ಯನನ್ನು ನಿಲ್ಲಿಸಲು ಅನುಸೂಯೆಯು ಪ್ರಾರ್ಥಿಸಿ, ಪಾತಿವ್ರತ್ಯದ ಮಹಿಮೆಯನ್ನು ಬೆಳಗಲಿಲ್ಲವೇ. ಸೂರ್ಯನ ಕುಲದಲ್ಲಿ ಜನಿಸಿದ ಶ್ರೀ ರಾಮಚಂದ್ರನುಧರ್ಮ ಸೂರ್ಯನಾಗಿ  ಮೆರೆಯಲಿಲ್ಲವೇ.
ಅಖಿಲವನ್ನು, ಅಖಂಡ ಅನುಗ್ರಹದಿಂದ ಅವಿರತವೂ, ಆಶ್ರಯ ನೀಡುವ ಅಭಿರಾಮಿಯ ಆಶೀರ್ವಾದ ಅಹರ್ನಿಶಿ ಇರಲು ಆಶಿಸೋಣವೇ

ಅಧ್ಯಾಯ-.
==========

ಮಹಾಲಕ್ಷ್ಮಿ
=============
ಸೃಷ್ಟಿ, ಸ್ಥಿತಿ, ಲಯಗಳಲ್ಲಿ ಸ್ಥಿತಿಯ ಪಾತ್ರ ಮಹತ್ವದ್ದು. ಯಾರನ್ನಾದರೂ, ಯಾವಾಗ ಹುಟ್ಟಿದೆ ಅಥವಾ ಯಾವಾಗ ಸಾಯುವೆ, ಎಂದು ಕೇಳುವುದಿಲ್ಲ.ಹೇಗಿದ್ದೀರಿಎಂದು ಕೇಳುತ್ತಾರೆ.
ರಕ್ಷಣೆಯ ಕಾರ್ಯವನ್ನು ಹೊತ್ತ ಮಹಾವಿಷ್ಣುವೇ ದೇವತೆಗಳಲ್ಲೇ ಅತ್ಯುತ್ತಮ ಎಂದುನಿರೂಪಿಸಲಾಗಿದೆ. ಹಿಂದೆ, ಋಷಿಗಳು ಒಮ್ಮೆ ಸಭೆ ಸೇರಿ,ಯಾವ ದೇವರು ಉತ್ತಮ’, ಎನ್ನಲು, ಶ್ರೀ ಹರಿಯೇ ಸರ್ವೊತ್ತಮ’, ಎಂದು ಶ್ರೀವತ್ಸರು ಘೋಶಿಸುತ್ತಾರೆ.
ಇದಕ್ಕೆ, ಪೂರಕವಾಗಿ, ಶ್ರೀ ಭೃಗು ಮಹರ್ಶಿಗಳು, ಬ್ರಹ್ಮ, ಶಿವರು
ಪತ್ನಿಯರೊಡನೆ ಸಂತೋಷದಿಂದಿರಲು, ಅವರನ್ನು ಶಪಿಸಿ, ವೈಕುಂಠ-
ದಲ್ಲಿ, ಅತಿ ಕ್ರೋಧಗೊಂಡು, ಶ್ರೀ ವಿಷ್ಣುವಿನ ವಕ್ಷಸ್ಥಳಕ್ಕೆ ಒದೆ-
ಯಲು, ಕೋಪಗೊಂಡ ಮಹಾಲಕ್ಷ್ಮಿ, ಬಿಟ್ಟು, ತೆರಳಿ, ಕೊಲ್ಲಾಪುರದಲ್ಲಿ ನೆಲೆಗೊಂಡಳು.  
ಶ್ರೀ ಲಕ್ಶ್ಮಿಯು ಕ್ಷೀರಾಬ್ಧಿಯಲ್ಲಿ ಜನಿಸಿ, ಶ್ರೀಹರಿಯನ್ನು, ವಿವಾಹವಾಗಿ, ಕಮಲಾಸನೆಯಾಗಿ, ಗಜವಾಹಿನಿಯಾಗಿ, ಅಷ್ಟೈಶ್ವರ್ಯಗಳನ್ನು ನೀಡುವ ಅಷ್ಟಲಕ್ಷ್ಮಿಯಾಗಿದ್ದಾಳೆ.
ಮೊದಲು ಧನ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ಸಂತಾನ
ಲಕ್ಷ್ಮಿ, ವೀರ ಲಕ್ಷ್ಮಿ, ವಿಜಯ ಲಕ್ಷ್ಮಿ, ಗಜ ಲಕ್ಷ್ಮಿ, ವಿದ್ಯಾ-ಲಕ್ಷ್ಮಿ, ಎಂದು ಬೆಳಗುತ್ತಿದ್ದಾಳೆ.
ಬಾಳಲು ಮಾನವನಿಗೆ ಸಂಪತ್ತು ಅಗತ್ಯ.ಹಾಗೆಯೇ, ಸಮಸ್ಯೆಗಳನ್ನು ಎದುರಿಸಲು, ಧೈರ್ಯ ಅಗತ್ಯ.ಅದಕ್ಕೇ, ಗೌರವ ಎಂದರೆ,ಗಜದ ಪ್ರತಿರೂಪ.ಅದರಲ್ಲಿ ಏರಿ ಬರುವ ಅರಸನಿಗೆ ಎಷ್ಟು ಗೌರವ.ಬರಿಯ ಹೊಟ್ಟೆಯಲ್ಲಿ ಬಾಳಲು ಸಾಧ್ಯವೆ. ಹೊಟ್ಟೆಯ ತುಂಬ ಆಹಾರ ಅಗತ್ಯ.ವಿವಾಹವಾದರೆ ಮನೆಯನ್ನು ಬೆಳಗಲು ಮಕ್ಕಳು  ಅಗತ್ಯ. ಎದುರಾಳಿಯನ್ನು ಎದುರಿಸಲು, ಸಾಹಸ ಅಗತ್ಯ. ಬರೀ ಪಶುವಿನಂತೆ ಬಾಳಿದರೆ,’ ವಿದ್ಯಾ ವಿಹೀನ ಪಶುಃ’  ಎನ್ನುವರು.ಅಂತೆಯೇ, ಜ್ಞಾನಾರ್ಜನೆ ಅಗತ್ಯ.ಕಾರ್ಯವನ್ನು ಮಾಡಿದರೆ, ಎಲ್ಲರೂ ಬಯಸುವುದು ಗೆಲುವು  ತಾನೇ. ಆಕೆಯೇ,ಜಯಲಕ್ಷ್ಮಿ. ;ಬಾಳಿನ ಸಮಸ್ಯೆಗಳನ್ನು ಎದುರಿಸಿ, ಹೋರಾಡಿ, ಅಂತಿಮದಲ್ಲಿ ಅಚ್ಯುತನಂಘ್ರಿಯನ್ನು ಪಡೆಯುವುದೇ ಮಹೋನ್ನತ ವಿಜಯ.’ಬಹುಶಃಲಕ್ಷ್ಮಿಎನ್ನುವ ಪದವೇ, ಲಕ್ಕಿ ಎನ್ನುವ ಆಂಗ್ಲಭಾಷೆಯ ತರ್ಜುಮೆಯಿರಬಹುದು. ’ಲಕ್ಷ್ಮಿಎಂದು ಹೆಸರಿಟ್ಟು, ಪ್ರೀತಿಯಿಂದಲಕ್ಕಿ ಎಂದು ಕರೆಯುತ್ತಾರೆ. ’ಲಕ್ಕಿಎಂದರೆ, ’ಅದೃಷ್ಟ.’ಕಾಣುವುದುದೃಷ್ಟ.
ಕಾಣದ್ದುಅದೃಷ್ಟ.’ ಅದುದೈವಾನುಗ್ರಹದ ಫಲ.’ ’‘ನಾವು ಬಯಸಿದ್ದು ಬಾಳಿನಲ್ಲಿ ದೊರಕದಿದ್ದರೆ, ದೊರಕಿದ್ದನ್ನೆ ಬಯಸಬೇಕು.’

ಅಧ್ಯಾಯ-.
=============
ಹೊರನಾಡು ಅನ್ನಪೂರ್ಣೇಶ್ವರಿ
============================
ಹೊರನಾಡು ಎಂದರೆ, ವಿದೇಶ ಎಂದಲ್ಲ.ಅದು ಬಾಹ್ಯ ಪ್ರಪಂಚದಿಂದ ಬೇರೆಯಾದ ಅಧ್ಯಾತ್ಮಿಕ ಲೋಕ ಎಂದು ಅರ್ಥೈಸಬೇಕು. ಶಿವನಂತೆ ಬ್ರಹ್ಮನಿಗೂ ಐದು ತಲೆಗಳಿದ್ದುವು. ಒಮ್ಮೆ ಬ್ರಹ್ಮ್ಮನನ್ನು ಪಾರ್ವತಿಯು ಶಿವನೆಂದು ಭಾವಿಸಿ ಸಮೀಪಿಸಿದಾಗ
ಕ್ರೊಧಗೊಂಡ ಶಿವನು ಬ್ರಹ್ಮನ ಶಿರವನ್ನು ತರಿದನು. ಶಿರವು [ಬ್ರಹ್ಮ ಕಪಾಲ] ಶಿವನ ಕೈಗೆ ಅಂಟಿಕೊಂಡಿತು. ಬ್ರಹ್ಮಹತ್ಯಾ ದೋಷದ ಸಲುವಾಗಿ ಕಪಾಲ ಬಿಡಿಸಲು ಸಾದ್ಯವಾಗಲಿಲ್ಲ ಬೇಸರಗೊಂದ ಶಿವನು ಎಲ್ಲಾ ಕಡೆಯೂ ಅಲೆದು ಕಡೆಯಲ್ಲಿ ಕಾಶಿಯಲ್ಲಿ ಅನ್ನಪೂರ್ಣೇಶ್ವರಿಯ ದಯೆಯಿಂದ ಕಪಾಲವು ಬಿಕ್ಷೆಯಿಂದ ತುಂಬಿತು.
ಬ್ರಹ್ಮಹತ್ಯಾ ದೋಷವು ನಿವಾರಣೆಯಾಯಿತು.
ಅನ್ನ ಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣ ವಲ್ಲಭೇ ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹೀಚ ಪಾರ್ವತಿಹೀಗೆ, ಶ್ರೀ ಶಂಕರಾಚರ್ಯರಿಗೆ ಒಮ್ಮೆ ಬಹಳ ಹಸಿವಾಯಿತು ಆಗ ತಾಯಿಯನ್ನು ಆಹಾರಕ್ಕಾಗಿ ಬೇಡಿದರು. ಎಚೆಚೆತ್ತು. ತಾವು ಪರಿವ್ರಾಜಕರೆಂಬುದನ್ನರಿತು, ಜ್ಞಾನ-ವೈರಾಗ್ಯದ ಭಿಕ್ಷೆಯನ್ನು ಬೇಡಿದರು.
ಕಾಶಿಯಲ್ಲಿ ಗಂಗೆಯಲ್ಲಿ ಮಿಂದು, ಶಿವ-ಪಾರ್ವತಿಯರನ್ನು ಆರಾಧಿಸಿ, ಅನ್ನಪೂರ್ಣೇಶ್ವರಿಯನ್ನು ಆರಾಧಿಸಿದರೆ, ಆತನಿಗೆ ಅನುಗ್ರಹ ನಿಶ್ಚಯ.ನಮ್ಮ ಅಗತ್ಯಗಳಲ್ಲಿ ಅತ್ಯಂತ ಅವಶ್ಯವಾದುದು ಅನ್ನ. ನಾದ ಬ್ರಹ್ಮ, ಜ್ಞಾನ ಬ್ರಹ್ಮದಂತೆ ಅನ್ನ ಬ್ರಹ್ಮವೂ ಮುಖ್ಯವಾದುದಾಗಿದೆ.
ನಮ್ಮ ಶರೀರದಲ್ಲಿ ಜಠರಾಗ್ನಿ ಇದೆ. ಅದರ ಶಮನಕ್ಕೆ ಆಹಾರ ಅಗತ್ಯ. ಇದಕ್ಕೆ, ಪಂಚಭೂತಗಳ ಅವಶ್ಯಕತೆಯು ಬೇಕಾಗಿದೆ. ಮೊದಲು
ಭೂಮಿ ಮತ್ತು ಹೊಲಗದ್ದೆ ಇರಬೇಕು.ನಂತರ ಬೀಜಗಳ ಬಿತ್ತನೆ, ಉಳುವಿಕೆ.ನಂತರ ಮಳೆಯನಿರೀಕ್ಷೆ. ಅದರಿಂದ ಉತ್ತಮ ಬೆಳೆಯ ಬೆಳೆವಣಿಗೆ.
ಅಗ್ನಿಸ್ಪರ್ಶದಿಂದ ಪಚನವಾಗುವುದು. ಗಾಳಿ ಅಧಿಕವಾದರೆ ಬೆಳೆಯ ನಾಶ. ಅದಕ್ಕೆ ವಾಯುವಿನ ಸಹಕಾರ ಅಗತ್ಯ. ಸೂರ್ಯನ ಆಗಮನವಾಗ-
ದಿದ್ದರೆ ರೈತನ ಕೆಲಸ ಸ್ಥಗಿತ. ಸುರ್ಯನ ಶಾಖವು ಅಗತ್ಯ. ಹೀಗೆ ಪಂಚಭೂತಗಳ ಸಹಕಾರ ಅಗತ್ಯ.
ಕಣ್ಣು ಆಹಾರ ಅರಸುತ್ತದೆ.[ಬೆಳಕು] ಕಿವಿ ಊಟದ ಕರೆಯನ್ನು ನಿರೀಕ್ಷಿಸುತ್ತದೆ.[ಶಬ್ದ]. ನಾಲಿಗೆ ರುಚಿಯನ್ನು ನೋಡುತ್ತದೆ.[ಜಲ].ಬೆಳೆ
ಭೂಮಿಯಲ್ಲಿ ಬೆಳೆದು, ಕೊಂಡು ನಾವು ಉಂಡು ನಂತರ ಸಂತಸ ಪಡುತ್ತೆ.[ಭೂಮಿ]. ಆಹಾರ ನಮ್ಮ ಪ್ರಾಣವಾಯುವಿಗೆ ಅವಶ್ಯಕ. ಹೀಗೆ, ಪಂಚ-
ಭೂತಗಳ ಸಮ್ಮಿಲನ.
ಹೊರನಾಡು ಸಸ್ಯಶ್ಯಾಮಲೆಯಂತೆ ವಿರಾಜವಾಗಿದೆ.ಭವ್ಯ ನಿಂತ ಭಂಗಿಯಲ್ಲಿ ಬೆಳಗುವ ಮಾತೆ. ಭಕ್ತರನ್ನು, ಮಾತೆ ಕರೆಯುತ್ತಾಳೆ. ಸ್ವಾಗತದ ನಂತರ ಫಲಹಾರ. ದೇವಿದರ್ಶನ.ಮಧ್ಯಾನದಲ್ಲಿ ಪೂಜೆ, ನಮ್ತರ ಸಂತೃಪ್ತ ಭೊಜನ.ವಿಶ್ರಾಂತಿಗೆ ಹಾಸಿಗೆ.ದಿಂಬು, ಇತ್ಯಾದಿ.ಸೌಲಭ್ಯವೂ ಉಂಟು.
ಶಾಂತ ಚಿತ್ತರಾಗಿ, ಸಸ್ಯಶಾಮಲೆಯಾದ ಮಾತೆಯನ್ನು ಭಕ್ತಿಭಾವದಿಂದ ಅರ್ಚಿಸಿ, ಶಾರೀರಿಕ, ಮಾನಸಿಕ,ಅಧ್ಯಾತ್ಮ ಸಂತೃಪ್ತಿ ಗಳಿಸಲು
ಇದು ಒಂದು ಪುಣ್ಯ ಸ್ಥಾನ.
ಮಗು ಹುಟ್ಟುತ್ತಲೇ ಅಳುವುದು ಆಹಾರಕ್ಕಾಗಿ. ಶ್ರೀ ಜ್ಞಾನಸಂಭಂದರಿಗೆ ತಾಯಿಯೇ ಆಹಾರ ಕೊಟ್ಟಳು.
ಅತ್ತರೆ, ಆಶ್ರಯ ಕೊಡುವ ತಾಯಿಗೆ, ನಾವು ಕೊಡುವ ಕ್ರುತಜ್ಞತೆಯೆಂದರೆ ಭಕ್ತಿ. ಅವಳಾನುಗ್ರಹವನ್ನು ಪಡೆಯಲು ಅದೇ ಯುಕ್ತಿ. ಅದಕ್ಕೆ
ಅವಶ್ಯ ವಿರಕ್ತಿ.