Friday, November 29, 2019

ramana vijaya

ಕಡೆಗೂ ಇಂದು ದೊರಕಿದೆ ಶ್ರೀರಾಮ ನಿನಗೆ ವಿಜಯ
ಧರ್ಮಕೂ ನ್ಯಾಯಕೂ ದೊರಕಿರುವ ವಿಜಯ
ನಿನ್ನ ಹಿರಿಮೆಯನ್ನು ಎತ್ತಿ ಹಿಡಿದಿದೆ ನ್ಯಾಯಾಲಯ
ಶತಮಾನದ ಹೋರಾಟಕೆ ಹೇಳಿದೆ ವಿದಾಯ
ರಾಜಕೀಯದಲ್ಲಿ ಸಿಲುಕಿ ನಲುಗಿದೆ ಈ ವಿಷಯ
ಒಳ ಜಗಳದಿಂದ ಬಹಳ ನೊಂದಿತು ಮೃದು ಹೃದಯ
ವೈಮನಸ್ಯ ಅಮಾಯಕರ ಹತ್ಯೆ ಸಲ್ಲಿಸಿದ ಕಂದಾಯ
ವಿಶ್ವಮಾನ್ಯ ನೀನೆ ಹೇಳು ಇದು ಯಾವ ಥರದ ನ್ಯಾಯ
ಪರಕೀಯರು ಧಾಳಿ ನಡೆಸಿ ಗಳಿಸಿದರು ವಿಜಯ
ಆದರೆ ಅವರ ಮನವ ಆವರಿಸಿತು ಏಕೊ ಭಯ
ಶತ್ರುಗಳನು ಕ್ಷಮಿಸುವ ನಿನ್ನ ಉದಾತ್ತ   ಧ್ಯೇಯ
ಮಾನವರ ಅಜ್ಞಾನದಿಂದ ತಂದಿತು ಅಪಾಯ
ನಿನ್ನ ನಾಮ ಸ್ಮರಣೆಯೊಂದೆ ಮುಕ್ತಿಗೆ ಉಪಾಯ
ಅದನರಿಯದ ಅಜ್ಞ್ಯರಿಗೆ ಕಾದಿದೆ ಅಪಾಯ
ಅದಕೆ ಮಾಡಬೇಕು ಭಕ್ತಿಯಲಿ ಪರಕಾಯ
ಆಗ ಧೈರ್ಯ ಬಂದು ಭಯ ಆಗುವುದು ಮಂಗಮಾಯ
ಇನ್ನಾದರು ಆಗಲಿ ಬೇಗ ನೀ ನೆಲೆಸಲು ದೇವಾಲಯ
ಇನ್ನಾದರು ಶ್ರಮಿಸಲಿ ಸೇವಿಸಲೀ ಕಾಯ
ನಿನ್ನ ಪಾದ ನಂಬಿದವರಿಗೆ ನೀ ನೀಡುವೆ ಅಭಯ
ವಿಶ್ವಮಾನ್ಯ ನೀ ರಾರಾಜಿಸಬೇಕು ಇದುವೆ ಎಲ್ಲರ ಧ್ಯೇಯ
==================================
ಶ್ರೀರಾಮ
=========
ರಾಮ ರಾಮ ರಾಮ
ನಿನಗಿಂದಾಯಿತು ಆರಾಮ
ದೊರಕಿತು ಚರ್ಚೆಗೆ ಪೂರ್ಣವಿರಾಮ
ಕಡೆಗು ತಂದಿದೆ ಜಯ ನಿನ್ನ ಮಹಿಮೆ ಶ್ರೀರಾಮ
ಅಂದು ಅನ್ಯರು ಬಂದು ಮಾಡಿದರು ನಿರ್ನಾಮ
ಆದರೇನು ಮನದಲ್ಲಿ ಬೀರಲಿಲ್ಲ ಪರಿಣಾಮ
ಯಾರಿಗೂ ಹಾಕಲಿಲ್ಲ ನ್ಯಾಯದೇವಿ ನಾಮ
ಮೈತ್ರಿಯ  ವೃದ್ಧಿಯಲಿ ಆಗಿಹೆ ನೀ  ನಿಸ್ಸೀಮ
ಆಸ್ತಿಕರುಹೇಳುವರು ನನ್ನ ಪ್ರಾಣ ರಾಮ
ನಾಸ್ತಿಕರು ಕೇಳುವರು ತೋರಲು ಶ್ರೀರಾಮ
ಮನದ ಕಣ್ಣು ತೆರೆದರೆ ತೋರುವನು ಆ ಸಾರ್ವಭೌಮ
ಒಳಗಣ್ಣು ತೆರೆದು ನೋಡೆ ಆಗಬೇಕೆಲ್ಲರು ಹನುಮ
ಇನ್ನಾದರು ರಾಮನಿಗೆ ಆಲಯವದಾಗಲಿ
ಅವನ ಹರಕೆ ನಾಡಿನ ಜನತೆಗೆಲ್ಲ ದೊರಕಲಿ
ವೈಷಮ್ಯವು ದೂರಾಗಿ ವಿಶ್ವಮೈತ್ರಿ ಬೆಳೆಯಲಿ
ರಾಮರಾಜ್ಯದ ಕನಸು ಶೀಘ್ರವೇ ನನಸಾಗಲಿ.
==============================

ರಾಮ

No comments: