|
ಪುರಂದರದಾಸ
===========
|
|||
| ದೇವಋಷಿ ನಾರದನು ಧರೆಗೆ ಬಂದನು | |||
| ಸೀನಪ್ಪನಾಯಕನ ಹೆಸರಲಿದ್ದನು | |||
| ಧನವನೆ ದೇವರೆಂದು ಪೂಜಿಸಿದ್ದನು | |||
| ಕೃಪಣನೆಂಬ ಬಿರುದನ್ನು ತಾ ಗಳಿಸಿದನು | |||
| ಅವನ ಮಡದಿ ಸರಸ್ವತಿಯೆಂದು ಖ್ಯಾತಳಾದಳು | |||
| ಅಚ್ಯುತನ ಹಗಲಿರುಳೂ ಧ್ಯಾನಿಸಿದ್ದಳು | |||
| ಪತಿಯ ನೆರಳಿನಲ್ಲೆ ತಾನು ನಡೆದಿದ್ದಳು | |||
| ಪತಿಯಲ್ಲೇ ಪರಮೇಶ್ವರನ ತಾನು ಕಂಡಳು | |||
| ವೃದ್ಧ ಬ್ರಾಹ್ಮಣನ ರೂಪದಲಿ ಹರಿಯು ಬಂದನು | |||
| ಮಗನ ಉಪನಯನಕೆ ಹಣ ಕೇಳಿದನು | |||
| ಕಿಲಿಬು ಕಾಸನೂ ಕೊಡೆ ಎಂದು ವರ್ತಕನೆನಲು | |||
| ಅವನ ಮಡದಿಯ ಬಳಿ ಬಂದು ನೆರವು ಕೇಳಿದನು | |||
| ತವರಿನ ಮೂಗುತಿಯನು ಅವಳು ‘ನೀಡಲು | |||
| ಅದ ವರ್ತಕನಿಗೆ ನೀಡಿ ಹಣ ನೀಡೆಂದನು | |||
| ಮಡದಿಯ ಬಳಿ ಬಂದು ಅವನು ನಿಜವ ಕೇಳಲು | |||
| ಮೂಗುತಿಯು ಮರಳಿ ಬರಲು ಮೂಕನಾದನು | |||
| ಎಲ್ಲ ಹಣ ದಾನವಿತ್ತು ದಾಸನಾದನು | |||
| ಪುರಂದರ ನಾಮಾಂಕಿತದಿ ಹಾಡಿ ನಿಂದನು | |||
| ವೇದದ ಸಾರವನು ಸುಲಭವಾಗಿ ಅರುಹುತ | |||
| ವಿಠ್ಠಲನ ಹಿರಿಮೆ ಹಾಡಿ ಖ್ಯಾತನಾದನು | |||
Friday, January 27, 2017
Subscribe to:
Post Comments (Atom)
No comments:
Post a Comment